alex Certify ಈ ರಾಶಿಯ ಸ್ತ್ರೀಯರಿಗೆ ಇದೆ ಇಂದು ಧನಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಸ್ತ್ರೀಯರಿಗೆ ಇದೆ ಇಂದು ಧನಲಾಭ

ಮೇಷ : ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ. ವಿದ್ಯಾರ್ಥಿಗಳು ಸೂಕ್ತ ಪೂರ್ವ ತಯಾರಿಯ ಜೊತೆಗೆ ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ. ಭೂಮಿ ಖರೀದಿ ಮಾಡಬೇಕೆಂದುಕೊಂಡವರಿಗೆ ಇದು ಶುಭ ದಿನ.

ವೃಷಭ : ರಾಜಕೀಯ ರಂಗದಲ್ಲಿ ಇರುವವರಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸಂಗಾತಿಯು ದುಬಾರಿ ಉಡುಗೊರೆಗೆ ನಿಮ್ಮ ಮುಂದೆ ಬೇಡಿಕೆ ಇಡುವ ಸಾಧ್ಯತೆ ಇದೆ. ಮೊದಲ ಆರ್ಥಿಕ ಸಂಕಷ್ಟದಲ್ಲಿರುವ ನೀವು ಇದೇ ವಿಚಾರಕ್ಕೆ ಸಂಗಾತಿಯೊಂದಿಗೆ ಮುನಿಸಿಕೊಳ್ಳಲಿದ್ದೀರಿ.

ಮಿಥುನ : ಹೊಸ ವ್ಯವಹಾರವನ್ನು ಆರಂಭಿಸಬೇಕು ಎಂದುಕೊಂಡಿರುವ ನೀವು ಕೈಯಲ್ಲಿ ಒಂದಷ್ಟು ಹಣವನ್ನು ಇಟ್ಟುಕೊಳ್ಳುವುದು ಒಳಿತು. ಬಣ್ಣದ ಮಾತುಗಳಿಗೆ ಎಂದಿಗೂ ಮರುಳಾಗಬೇಡಿ. ಸ್ತ್ರೀಯರಿಗೆ ಇಂದು ಧನಲಾಭವಿದೆ.

BREAKING: ಪಂಜಾಬ್‌ ಮಾಜಿ ಮುಖ್ಯಮಂತ್ರಿಯಿಂದ ಹೊಸ ಪಕ್ಷ ಸ್ಥಾಪನೆಯ ಅಧಿಕೃತ ಘೋಷಣೆ

ಕಟಕ : ಆಸ್ತಿ ವಿಚಾರದಲ್ಲಿ ಕುಟುಂಬಸ್ಥರ ಜೊತೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ನಿಮ್ಮ ಔದಾರ್ಯ ಗುಣವು ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸಲಿದೆ. ಆರ್ಥಿಕ ಸಂಕಷ್ಟವು ನಿಮಗೆ ಇನ್ನಷ್ಟು ಆತಂಕವನ್ನು ಹೆಚ್ಚಿಸಲಿದೆ.

ಸಿಂಹ : ಸೋಮಾರಿತನದಿಂದಾಗಿ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗಲಿದ್ದಾರೆ. ಉದ್ಯಮದಲ್ಲಿ ಇರುವವರಿಗೆ ತಾಳ್ಮೆ ತುಂಬಾನೇ ಮುಖ್ಯವಾಗಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಕನ್ಯಾ : ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಬೇಕೆಂದು ಕೊಂಡವರಿಗೆ ಇಂದು ಸೂಕ್ತ ಸಮಯವಲ್ಲ. ಹೀಗಾಗಿ ಇನ್ನೂ ಕೆಲವು ಸಮಯ ಕಾಯುವುದು ಒಳಿತು. ಉದ್ಯೋಗದಲ್ಲಿ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಕಲಾವಿದರಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ತುಲಾ : ಹೊಸ ಮನೆ ಖರೀದಿ ಮಾಡುವ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಲಿದ್ದೀರಿ. ಮೇಲಾಧಿಕಾರಿಯ ಕಿರುಕುಳದಿಂದ ಬೇಸತ್ತ ನೀವು ಇಂದು ಕೆಲಸವನ್ನು ಬದಲಾಯಿಸುವ ಬಗ್ಗೆ ಸಂಗಾತಿಯೊಂದಿಗೆ ಚರ್ಚೆ ನಡೆಸಲಿದ್ದೀರಿ. ಮನೆಯ ಕಿರಿಯ ಸದಸ್ಯರಿಂದ ಶುಭ ವಾರ್ತೆ ಕೇಳುವಿರಿ.

ಲಖೀಂಪುರ ಖೇರಿ ಹಿಂಸಾಚಾರ: ಪ್ರತ್ಯಕ್ಷದರ್ಶಿಗಳ ಸಂಪೂರ್ಣ ಮಾಹಿತಿ ನೀಡಿದ ಎಸ್​ಐಟಿ

ವೃಶ್ಚಿಕ : ನಿಮ್ಮ ಆಸಕ್ತಿಗೆ ತಕ್ಕಂತೆ ಅವಕಾಶಗಳು ಸಿಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇರಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಬಹುದು. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ.

ಧನು : ಕ್ಷುಲ್ಲಕ ಕಾರಣಕ್ಕೆ ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ವಿಚಾರ ನಿಮ್ಮ ತಲೆಯಲ್ಲಿರಲಿ. ಅತಿಯಾದ ಖರ್ಚು ಮುಂದಿನ ದಿನಗಳಲ್ಲಿ ನಿಮಗೆ ಸಂಕಷ್ಟ ತರಬಹುದು. ನಿಮ್ಮ ಕೆಲಸಗಳಿಗೆ ಮೇಲಾಧಿಕಾರಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಮಕರ : ಕಚೇರಿಗೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರಲಿದೆ. ಉದ್ಯಮದಲ್ಲಿ ಇರುವವರಿಗೆ ಆದಾಯ ಉತ್ತಮವಾಗಿ ಇರಲಿದೆ.

ಇಲ್ಲಿದೆ ನಿಂಬೆಯ ಹಲವು ‘ಔಷಧೀಯ’ ಪ್ರಯೋಜನಗಳು

ಕುಂಭ : ಪ್ರೇಮ ಜೀವನದಲ್ಲಿ ದೊಡ್ಡ ಬಿರುಗಾಳಿಯೇ ಏಳಲಿದೆ. ಇದರಿಂದ ನೀವು ಮಾನಸಿಕವಾಗಿ ಕುಗ್ಗಲಿದ್ದೀರಿ. ನಿಮಗೆ ಅರಿವೆ ಇಲ್ಲದಂತೆ ಸಂಗಾತಿಯ ಮನಸ್ಸಿಗೆ ನೋವುಂಟು ಮಾಡಲಿದ್ದೀರಿ. ಅನಿರೀಕ್ಷಿತ ಅತಿಥಿಯ ಆಗಮನವಿದೆ.

ಮೀನ : ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವಿದ್ಯಾರ್ಥಿಗಳಿಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಗಣ್ಯರನ್ನು ಭೇಟಿಯಾಗಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...