alex Certify ಶನಿವಾರದ ದಿನ ಭವಿಷ್ಯ: ಹೇಗಿದೆ ನಿಮ್ಮ ಇಂದಿನ ರಾಶಿ ಫಲ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿವಾರದ ದಿನ ಭವಿಷ್ಯ: ಹೇಗಿದೆ ನಿಮ್ಮ ಇಂದಿನ ರಾಶಿ ಫಲ….?

ಮೇಷ : ಉದ್ಯೋಗದಲ್ಲಿ ಬಡ್ತಿ ಹೊಂದಬೇಕು ಎಂಬ ನಿಮ್ಮ ಕನಸು ನನಸಾಗಲಿದೆ. ಸಂಗಾತಿಯೊಡನೆ ಮನಸ್ಸಿಗಾದ ನೋವಿನ ಬಗ್ಗೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಲಿದ್ದೀರಿ. ದಾಂಪತ್ಯ ಜೀವನ ಸುಖಮಯವಾಗಿ ಸಾಗಲಿದೆ. ವಿದ್ಯಾರ್ಥಿಗಳಿಗೆ ಇದು ಶುಭ ದಿನ.

ವೃಷಭ: ನೀವು ಆಪ್ತರು ಎಂದುಕೊಂಡವರೇ ಬೆನ್ನಿಗೆ ಚೂರಿ ಹಾಕಲಿದ್ದಾರೆ. ಆಸ್ತಿ ವಿಚಾರದಲ್ಲಿ ಮಕ್ಕಳ ಜೊತೆ ವಾಗ್ವಾದ ಉಂಟಾಗಲಿದೆ. ದೂರದಿಂದ ಬಂಧುಗಳು ಮನೆಗೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ : ದಾಂಪತ್ಯ ಜೀವನದಲ್ಲಿ ನಿಮ್ಮದೇ ಮೇಲುಗೈ ಇರಲಿದೆ. ಪರಿಸ್ಥಿತಿ ಎಂದಿಗೂ ನಿಮ್ಮ ಪರವಾಗಿಯೇ ಇರಲಿದೆ ಎಂಬ ಭ್ರಮೆ ಬೇಡ. ಒಮ್ಮೊಮ್ಮೆ ಪರಿಸ್ಥಿತಿ ನಿಮಗೆ ಉಲ್ಟಾ ಹೊಡೆಯಬಹುದು. ಹೀಗಾಗಿ ಅತೀ ಆತ್ಮವಿಶ್ವಾಸ ಒಳ್ಳೆಯದಲ್ಲ.

ಕಟಕ : ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಕುಟುಂಬದಲ್ಲಿ ನೀವು ಮಾಡದ ತಪ್ಪಿಗೆ ಅಪವಾದ ಎದುರಿಸಬೇಕಾಗಿ ಬರಬಹುದು. ತಾಳ್ಮೆ ಇರಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.

ಸಿಂಹ: ದೈವಾನುಗ್ರಹದಿಂದ ನೀವು ಅಂದುಕೊಂಡ ಕಾರ್ಯಗಳು ಒಳ್ಳೆ ರೀತಿಯಲ್ಲಿ ನಡೆಯಲಿದೆ. ಮಕ್ಕಳಿಂದ ಮನಸ್ಸಿಗೆ ಘಾಸಿಗೊಳಗಾಗಲಿದ್ದೀರಿ. ಹಣಕಾಸಿನ ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ. ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.

ಕನ್ಯಾ: ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಲಿದ್ದೀರಿ. ಆಸ್ತಿ ಮಾರಾಟ ಮಾಡುವ ನಿಮ್ಮ ಆಸೆ ಕೊನೆಗೂ ಈಡೇರಲಿದೆ. ಹೊಸ ಆದಾಯ ಮೂಲ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕ್ಷುಲ್ಲಕ ಕಾರಣಕ್ಕೆ ನೆರೆ ಹೊರೆಯವರ ಜೊತೆ ಕಿರಿಕಿರಿ ಎದುರಿಸಲಿದ್ದೀರಿ.

ತುಲಾ: ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸ್ತ್ರೀಯರ ಜೊತೆ ಅತಿಯಾದ ಸಲುಗೆ ಬೇಡ. ಹೊಸ ಕೆಲಸಗಳನ್ನ ಮಾಡಲು ಉತ್ಸಾಹ ತೋರಿ. ಇದರಿಂದ ನಿಮಗೆ ಲಾಭವಿದೆ.

ವೃಶ್ಚಿಕ : ನಿಮ್ಮ ಹೊಸ ಪ್ರಯತ್ನಗಳಿಗೆ ಕುಟುಂಬಸ್ಥರಿಂದ ಬೆಂಬಲ ಸಿಗಲಿದೆ. ಇದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗದ ವಿಚಾರದಲ್ಲಿ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ವೈವಾಹಿಕ ಸಂಬಂಧಕ್ಕೆ ಹುಡುಕಾಡುತ್ತಿರುವವರಿಗೆ ಇಂದು ಶುಭ ಸುದ್ದಿ ಸಿಗಲಿದೆ.

ಧನು : ನವವಿವಾಹಿತರಿಗೆ ಸಂತಾನ ಭಾಗ್ಯವಿದೆ. ಎಲ್ಲರನ್ನೂ ಮೆಚ್ಚಿಸುವ ಕಾರ್ಯವನ್ನು ಬಿಟ್ಟುಬಿಡಿ. ನಿಮ್ಮ ನಿಜವಾದ ಗುಣ ಹೇಗಿದೆಯೋ ಅದೇ ರೀತಿ ಬದುಕಿ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯ ಸಮಸ್ಯೆ ನಿಮ್ಮನ್ನ ಕಾಡೋದ್ರಿಂದ ಮಾನಸಿಕವಾಗಿ ಘಾಸಿಗೊಳಗಾಗಲಿದ್ದೀರಿ.

ಮಕರ : ಅರ್ಥವಿಲ್ಲದ ಮಾತುಗಳನ್ನಾಡಿ ಸಾರ್ವಜನಿಕ ಸ್ಥಳದಲ್ಲಿ ಮುಜುಗರಕ್ಕೆ ಒಳಗಾಗಲಿದ್ದೀರಿ. ಅಪೂರ್ಣ ಕಾರ್ಯವನ್ನು ಪೂರ್ತಿ ಮಾಡಲಿದ್ದೀರಿ. ಮಹಿಳಾ ಸ್ನೇಹಿತರ ಬೆಂಬಲದಿಂದ ಪ್ರಗತಿ ಸಿಗಲಿದೆ. ಮಕ್ಕಳ ಸಾಧನೆಯಿಂದ ತೃಪ್ತಿಗೊಳ್ಳಲಿದ್ದೀರಿ.

ಕುಂಭ : ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಕಾಣಲಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಆರ್ಥಿಕವಾಗಿ ಹಿನ್ನಡೆ ಉಂಟಾಗೋದ್ರಿಂದ ಆತಂಕಕ್ಕೆ ಒಳಗಾಗುವಿರಿ.

ಮೀನ : ವೈದ್ಯ ವೃತ್ತಿಯಲ್ಲಿ ಇರುವವರು ನಿಮ್ಮ ಸೇವೆಯ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಶಂಸೆ ಗಿಟ್ಟಿಸಲಿದ್ದೀರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗೋದ್ರಿಂದ ಸಮಸ್ಯೆ ಉಂಟಾಗಲಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...