alex Certify ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಏರುಪೇರು ಸಾಧ್ಯತೆ….!

ಮೇಷ: ಮನೆ ನಿರ್ಮಾಣ ಮಾಡುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದೀರಿ. ಇದು ನಿಮ್ಮ ಪೋಷಕರ ಸಂತಸಕ್ಕೆ ಕಾರಣವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ದೊರಕಲಿದೆ. ಧಾರ್ಮಿಕ ಕಾರ್ಯಗಳತ್ತ ಒಲವು ತೋರಲಿದ್ದೀರಿ.

ವೃಷಭ : ನಿಮ್ಮ ಜೀವನದ ಕಹಿ ಘಟನೆಯೊಂದು ಇಂದು ನಿಮಗೆ ಮತ್ತೊಮ್ಮೆ ಕಣ್ಣೆದುರಿಗೆ ಬರಲಿದೆ. ಇದರಿಂದ ನೀವು ಮಾನಸಿಕವಾಗಿ ಕುಗ್ಗಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ. ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಜಾಗ್ರತೆಯಿಂದಿರಿ.

ಮಿಥುನ : ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತಿನಲ್ಲಿ ತಲೆಯಲ್ಲಿರಲಿ. ಯಾರದ್ದೋ ಮಾತನ್ನು ನಂಬಿ ಸಂಗಾತಿಗೆ ಅವಮಾನ ಮಾಡಲಿದ್ದೀರಿ. ಇದು ನಿಮ್ಮ ದಾಂಪತ್ಯದಲ್ಲಿ ಬಹುದೊಡ್ಡ ಅಂತರವನ್ನೇ ತಂದುಬಿಡಬಹುದು. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ.

ಕಟಕ : ಬೇರೆಯವರ ಎದುರು ಶ್ರೀಮಂತಿಕೆ ತೋರಿಸಿಕೊಳ್ಳಲು ಹೋಗಿ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಹುಚ್ಚು ಸಾಹಸಗಳು ಬೇಡ. ತಪ್ಪು ಮಾಡಿದ್ದೀರಾ ಎಂದು ತಿಳಿದ ತಕ್ಷಣ ವಾದ ಮಾಡುವ ಬದಲು ತಿದ್ದಿಕೊಳ್ಳಲು ಯತ್ನಿಸಿ.

ಸಿಂಹ : ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತಿನಂತೆ ನೀವು ಕಷ್ಟಪಟ್ಟು ದುಡಿದರೆ ಮಾತ್ರ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ. ಆದರೆ ಮನೆಮದ್ದಿನ ಮೂಲಕ ಅನಾರೋಗ್ಯದಿಂದ ಪಾರಾಗಲಿದ್ದೀರಿ.

ಕನ್ಯಾ : ಹೊಸ ಉದ್ಯಮವನ್ನು ಶುರು ಮಾಡಬೇಕೆಂಬ ನಿಮ್ಮ ಕನಸು ನನಸಾಗಲಿದೆ. ಇದರಿಂದ ನಿಮ್ಮ ಪೋಷಕರು ಸಂತಸಗೊಳ್ಳಲಿದ್ದಾರೆ. ಕಚೇರಿ ಕೆಲಸದಲ್ಲಿ ಎಚ್ಚರಿಕೆಯಿಂದಿರಿ. ಇಲ್ಲವಾದಲ್ಲಿ ಹಿತಶತ್ರುಗಳ ಕಾಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ವೈದಕೀಯ ಕ್ಷೇತ್ರದಲ್ಲಿ ಇರುವವರಿಗೆ ಇದು ಒತ್ತಡದ ದಿನವಾಗಿರಲಿದೆ.

ತುಲಾ : ವ್ಯಾಪಾರ – ವ್ಯವಹಾರದ ಕ್ಷೇತ್ರದಲ್ಲಿ ಇರುವವರಿಗೆ ಇದು ಶುಭ ದಿನವಲ್ಲ. ಯಂತ್ರಗಳನ್ನು ಬಳಸುವಾಗ ಜಾಗ್ರತೆಯಿಂದಿರಿ. ಇಲ್ಲವಾದಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇರಲಿ. ಸೌಂದರ್ಯ ವರ್ಧಕ ವ್ಯಾಪಾರಿಗಳಿಗೆ ಇದು ಲಾಭದ ದಿನವಾಗಿರಲಿದೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿಯಿದೆ.

ವೃಶ್ಚಿಕ : ಕೌಟುಂಬಿಕ ಸಂಕಷ್ಟಗಳನ್ನು ಜಾಣ್ಮೆ ಹಾಗೂ ತಾಳ್ಮೆಯಿಂದ ನಿರ್ವಹಿಸಿ. ಈ ರೀತಿ ಮಾಡಿದಲ್ಲಿ ಮಾತ್ರ ಕುಟುಂಬಸ್ಥರ ನಡುವಿನ ವಿವಾದವು ಶಮನವಾಗಲಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗವಿದೆ. ಮನೆಯ ಚಿಕ್ಕ ಸದಸ್ಯರಿಂದ ಶುಭ ವಾರ್ತೆ ಕೇಳುವಿರಿ.

ಧನು : ಕಚೇರಿ ಕೆಲಸದಲ್ಲಿ ಜಾಣ್ಮೆಯಿಂದ ಇರುವದರಿಂದ ಮಾತ್ರ ಯಶಸ್ಸಿನತ್ತ ಸಾಗಲಿದ್ದೀರಿ. ಹೈನೋದ್ಯಮದಲ್ಲಿ ಇರುವವರಿಗೆ ಇದು ಲಾಭದ ದಿನವಾಗಲಿದೆ. ವ್ಯವಹಾರದಲ್ಲಿ ಲಾಭ ಸಿಗುತ್ತಿಲ್ಲ ಎಂದು ನಿರಾಶಗೆ ಒಳಗಾಗಬೇಡಿ. ಅತ್ತೆ – ಸೊಸೆ ನಡುವೆ ಕಲಹ ಏರ್ಪಡುವ ಸಾಧ್ಯತೆ ಇದೆ.

ಮಕರ : ಜೀವನದ ಕಷ್ಟಗಳೆಲ್ಲವೂ ಹಂತ ಹಂತವಾಗಿ ಕೊನೆಗೊಳ್ಳಲಿದೆ. ಆಸ್ತಿ ವಿಚಾರವಾಗಿ ದಾಯಾದಿಗಳ ನಡುವೆ ಕಲಹ ಏರ್ಪಡುವ ಸಾಧ್ಯತೆ ಇದೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಮಕ್ಕಳು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕಾಲ ಮೀರುವ ಮುನ್ನ ಪೋಷಕರು ಎಚ್ಚೆತ್ತುಕೊಂಡಲ್ಲಿ ಒಳಿತಿದೆ.

ಕುಂಭ : ಕಚೇರಿಯಲ್ಲಿ ಮಾತನ್ನು ಕಡಿಮೆ ಮಾಡಿಕೊಂಡಷ್ಟೂ ನಿಮಗೆ ಒಳ್ಳೆಯದು. ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ನಿಮ್ಮ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ. ಕಳೆದು ಹೋದ ಸಂಪತ್ತಿನ ಬಗ್ಗೆ ಕೊರಗುವ ಬದಲು ಅದೇ ಸಂಪತ್ತು ಮತ್ತೆ ಗಳಿಸಿಕೊಳ್ಳಲು ಇರುವ ಮಾರ್ಗವನ್ನು ಹುಡುಕಿ.

ಮೀನ : ವೈವಾಹಿಕ ಜೀವನದ ಕಲಹಗಳೆಲ್ಲವೂ ದೂರಾಗಿ ನೆಮ್ಮದಿ ನೆಲೆಸಲಿದೆ. ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳು ಹುಡುಕಿಕೊಂಡು ಬರಲಿದೆ. ಎಷ್ಟೇ ಕಷ್ಟ ಬಂದರೂ ಗುರಿಯನ್ನು ಸಾಧಿಸಲೇಬೇಕೆಂಬ ನಿಮ್ಮ ಛಲವು ಯಶಸ್ಸಿನತ್ತ ಕೊಂಡೊಯ್ಯಲಿದೆ. ತಾಯಿಯ ಅನಾರೋಗ್ಯವು ನಿಮ್ಮ ನೆಮ್ಮದಿಯನ್ನು ಕೆಡಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...