alex Certify ಕೊರೋನಾ ಹೊತ್ತಲ್ಲಿ ದೇಶದ ಹಿತ ಮರೆತ ಮೋದಿಗೆ ಜನರಿಂದ ಕಪಾಳ ಮೋಕ್ಷ: ಹೆಚ್.ಕೆ. ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಹೊತ್ತಲ್ಲಿ ದೇಶದ ಹಿತ ಮರೆತ ಮೋದಿಗೆ ಜನರಿಂದ ಕಪಾಳ ಮೋಕ್ಷ: ಹೆಚ್.ಕೆ. ಪಾಟೀಲ್

ಗದಗ: ಪಶ್ಚಿಮ ಬಂಗಾಳ ಎಲೆಕ್ಷನ್ ರಿಸಲ್ಟ್ ಪ್ರಧಾನಿ ನರೇಂದ್ರ ಮೋದಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.

ಗದಗ ನಗರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮೋದಿ ಕೊರೋನಾ ನಿಯಮ ಗಾಳಿಗೆ ತೂರಿ ಪ್ರಚಾರ ನಡೆಸಿದ್ದರು. ಕೊರೋನಾ ಆತಂಕದಲ್ಲಿದ್ದ ಜನರು, ತಜ್ಞರ ಎಚ್ಚರಿಕೆ ಮಧ್ಯೆ ನಿಯಮ ಉಲ್ಲಂಘಿಸಿ ಅತ್ಯಂತ ಕೆಳಮಟ್ಟದ ಪ್ರಚಾರ ನಡೆಸಿದ್ದರು ಎಂದು ಟೀಕಿಸಿದ್ದಾರೆ.

ಏನಾದರೂ ಮಾಡಿ ಗೆಲ್ಲಬೇಕೆಂದುಕೊಂಡಿದ್ದ ಮೋದಿ ಮತ್ತು ಅಮಿತ್ ಶಾ ಅವರಿಗೆ ಪಶ್ಚಿಮಬಂಗಾಳದ ಜನರು ಸರಿಯಾದ ಬುದ್ಧಿ ಕಲಿಸಿದ್ದಾರೆ. ಇದು ಪ್ರಧಾನಿ ಮೋದಿಯವರಿಗೆ ಸಾಧಾರಣ ಸೋಲಲ್ಲ. ಕೊರೋನಾ ಸಂಕಷ್ಟದಲ್ಲಿ ಚುನಾವಣೆ ಗೆಲುವಿಗಾಗಿ ಓಡಾಟ ನಡೆಸಿದ್ದರು. ದೇಶದ ಹಿತ ಮರೆತಿದ್ದ ಮೋದಿಗೆ ಜನ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...