alex Certify ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಹಿಂಡನ್ ನದಿ; ಪರಿಸ್ಥಿತಿ ಗಂಭೀರವಾಗಲು ಕಾರಣವೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಹಿಂಡನ್ ನದಿ; ಪರಿಸ್ಥಿತಿ ಗಂಭೀರವಾಗಲು ಕಾರಣವೇನು…..?

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಬಹ್ಲೋಲ್‌ಪುರ ಗ್ರಾಮದ ಮೂಲಕ ಹರಿಯುವ ಹಿಂಡನ್ ನದಿಯ ಒಂದು ಭಾಗವು ಗಾಢವಾದ ಕೆಂಪು ಬಣ್ಣಕ್ಕೆ ತಿರುಗಿದೆ. ಇದು ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ.

ನದಿಯ ನೀರು ಕೆಂಪು ಬಣ್ಣದಿಂದ ಹಳದಿ ಬಣ್ಣಕ್ಕೆ ಮತ್ತು ಕಡು ಕಪ್ಪು ಬಣ್ಣಕ್ಕೂ ತಿರುಗಿದೆ. ಹಲವಾರು ಅಕ್ರಮ ಡೈಯಿಂಗ್ ಘಟಕಗಳಿಂದಾಗಿ ಈ ಮಾಲಿನ್ಯ ಉಂಟಾಗುತ್ತಿದ್ದು, ನದಿಯ ನೀರಿನ ಬಣ್ಣ ಬದಲಾಗಲು ಕಾರಣವಾಗಿದೆ. ಸರ್ಕಾರ ಮತ್ತು ನ್ಯಾಯಾಂಗದಿಂದ ಹಲವಾರು ನಿರ್ದೇಶನಗಳ ಹೊರತಾಗಿಯೂ, ಹಿಂಡನ್ ನದಿಗೆ ತ್ಯಾಜ್ಯನೀರು ಮತ್ತು ಕೈಗಾರಿಕಾ ತ್ಯಾಜ್ಯವನ್ನು ಬಿಡಲಾಗುತ್ತಿದೆ.

ಈ ನದಿಯು ಯಮುನಾ ನದಿಯ ಉಪನದಿಯಾಗಿದೆ. ಸೋನು ಯಾದವ್ ಎಂಬುವವರು ನದಿಯ ಬಗ್ಗೆ ಸಂಕಟದಿಂದ ವಿವರಿಸಿದ್ದಾರೆ. ಹಳ್ಳಿಯಲ್ಲಿ ಯಾವುದೇ ಡೈಯಿಂಗ್ ಘಟಕಗಳು ಅಥವಾ ವಸತಿ ಕಾಲೋನಿಗಳಿಲ್ಲದ ಸಮಯವನ್ನು ನೆನಪಿಸಿಕೊಂಡ ಅವರು, ಗ್ರಾಮಸ್ಥರು ಅದರ ದಡದಲ್ಲಿ ಬೆಳೆಗಳನ್ನು ಬೆಳೆದಾಗ ನದಿಯು ಮೀನುಗಳಿಂದ ತುಂಬಿತ್ತು. ಆ ದಿನಗಳು ಬಹಳ ಹಿಂದೆಯೇ ಕಳೆದುಹೋಗಿವೆ. ಮೀನುಗಳ ಸಂತತಿ ಕಣ್ಮರೆಯಾಗಿದೆ. ಒಂದು ಕಾಲದಲ್ಲಿ ಫಲವತ್ತಾದ ಕೃಷಿಭೂಮಿಗಳನ್ನು ಕಲುಷಿತ ಮೋರಿಯಿಂದ ಬದಲಾಯಿಸಲಾಗಿದೆ ಎಂದು ಯಾದವ್ ವಿಷಾದಿಸಿದರು.

ಪರಿಸರವಾದಿ ವಿಕ್ರಾಂತ್ ತೊಂಗಡ್ ಅವರು ಕೆಂಪು ಬಣ್ಣದ ಹಿಂಡನ್ ನದಿಯ ನೀರಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಕೊಂಡಿದೆ. ಅದನ್ನು ಪರಿಹರಿಸಲು ಕ್ರಮಗಳನ್ನು ಕೈಗೊಂಡಿದೆ. ಯುಪಿಪಿಸಿಬಿ ಈ ಅಕ್ರಮ ಡೈಯಿಂಗ್ ಘಟಕಗಳಿಗೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವಂತೆ ಕರೆ ನೀಡಿದ್ದು, ಈ ಪ್ರದೇಶದಲ್ಲಿ ಪ್ರಸ್ತುತ 30 ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...