alex Certify ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ

ಭಾರೀ ಭೂಕುಸಿತದಿಂದ ಹಿಮಾಚಲ ಪ್ರದೇಶದ ಸಂಗ್ಲಾ ಕಣಿವೆಯಲ್ಲಿ ಸೇತುವೆಯೊಂದರ ಮೇಲೆ ಭಾರೀ ಬಂಡೆಗಳು ಕುಸಿದು ಬಿದ್ದಿದ್ದು, ಮುರಿದುಬಿದ್ದ ಸೇತುವೆ ನದಿಗೆ ಬಿದ್ದಿದೆ.

“ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಈ ಪ್ರವಾಸಿಗರು ಸಂಚರಿಸುತ್ತಿದ್ದ ವಾಹನಕ್ಕೆ ಬಂಡೆಗಲ್ಲುಗಳು ಅಪ್ಪಳಿಸಿವೆ” ಎಂದು ಕಿನ್ನೌರ್‌‌ನ ಎಸ್ಪಿ ಸಂಜು ರಾಮ್ ರಾಣಾ ತಿಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ʼಗರ್ಭಧಾರಣೆʼ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ ಈ ಆಹಾರ

ಘಟನೆಯಲ್ಲಿ ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...