alex Certify BREAKING : ಪಾಠ ಮಾಡಿ ಬಂದು ಕುಳಿತಾಗಲೇ ‘ಹೃದಯಾಘಾತ’ : ರಾಯಚೂರಿನಲ್ಲಿ ಶಿಕ್ಷಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಪಾಠ ಮಾಡಿ ಬಂದು ಕುಳಿತಾಗಲೇ ‘ಹೃದಯಾಘಾತ’ : ರಾಯಚೂರಿನಲ್ಲಿ ಶಿಕ್ಷಕ ಸಾವು

ರಾಯಚೂರು : ಪಾಠ ಮಾಡಿ ಬಂದು ಕುಳಿತಾಗಲೇ ಹೃದಯಾಘಾತವಾಗಿ ಶಿಕ್ಷಕ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗದ್ರಟಗಿ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸುರೇಶ್ (57) ಎಂಬುವವರು ಮೃತಪಟ್ಟಿದ್ದಾರೆ. ರಾಣೆಬೆನ್ನೂರು ಮೂಲದವರಾದ ಸುರೇಶ್ ಶಾಲೆಯಲ್ಲಿ ಉತ್ತಮ ಶಿಕ್ಷಕ ಎಂಬ ಹೆಸರು ಮಾಡಿದ್ದರು.

ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ತರಗತಿಗೆ ಹೋಗಿ ಪಾಠ ಮಾಡಿ ಬಂದು ಕಚೇರಿಯಲ್ಲಿ ಕುಳಿತ ಸುರೇಶ್ ಗೆ ಹಾರ್ಟ್ ಅಟ್ಯಾಕ್ ಆಗಿದೆ, ಕೂಡಲೇ ಶಿಕ್ಷಕರು ನೀರು ಕೊಟ್ಟು ಉಪಚರಿಸಿದ್ದಾರೆ. ಆದರೆ ಕುಳಿತಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ. ಶಿಕ್ಷಕರ ನಿಧನಕ್ಕೆ ಮಕ್ಕಳು, ಗ್ರಾಮದ ಜನರು ಕಂಬನಿ ಮಿಡಿದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...