ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ಮುಂದುವರೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ ‘ನಾನು ಟೆಂಟ್ ಗಳಲ್ಲಿ ‘ಬ್ಲೂ ಫಿಲಂ’ ತೋರಿಸಿಕೊಂಡು ಬಂದವನಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ವಿಧಾಸೌಧದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ನಾನು ಬ್ಲೂ ಫಿಲಂ ತೋರಿಸಿ ಬಂದವನಲ್ಲ, ನಾನು ರಾಜಕಾರಣಕ್ಕೆ ಬರುವ ಮುನ್ನ ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡುತ್ತಿರಲಿಲ್ಲ, ನಾನು ಕಷ್ಟಪಟ್ಟು ಮುಂದೆ ಬಂದಿದ್ದೇನೆ ಎಂದು ಹೇಳಿದರು.
ವರ್ಗಾವಣೆ ದಂಧೆಯ ದಾಖಲೆ ಈ ಪೆನ್ ಡ್ರೈವ್ ನಲ್ಲಿದೆ. ಆಡಿಯೋ ದಾಖಲೆಗಳು ಇದರಲ್ಲಿವೆ. ಸಮಯ ಬಂದಾಗ ಪೆನ್ ಡ್ರೈವ್ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ನಾನೇನು ಕೆ ಎಸ್ ಟಿ ಟ್ಯಾಕ್ಸ್ ಅಂತ ಇಟ್ಟುಕೊಂಡಿದ್ನಾ? ತಾಜ್ ವೆಸ್ಟ್ ಎಂಡ್ ಬಿಲ್ ನ್ನು ಕಾಂಗ್ರೆಸ್ ನವರಿಗೇನಾದ್ರೂ ಕಳುಹಿಸಿದ್ರಾ? ನಾನೇನು ಬೀದಿಯಲ್ಲಿ ಹೋಗುವವನಾ? 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ನನ್ನ ಆಸ್ತಿ ಬಗ್ಗೆಯೂ ಸರ್ಕಾರ ತನಿಖೆಯನ್ನು ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.