alex Certify BIG NEWS: ಅಕ್ರಮ ಗಣಿಗಾರಿಕೆ ಮೇಲೆ ದಾಳಿ; DYSP ಮೇಲೆ ಟ್ರಕ್ ಹರಿಸಿ ಕೊಂದ ದುಷ್ಕರ್ಮಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಕ್ರಮ ಗಣಿಗಾರಿಕೆ ಮೇಲೆ ದಾಳಿ; DYSP ಮೇಲೆ ಟ್ರಕ್ ಹರಿಸಿ ಕೊಂದ ದುಷ್ಕರ್ಮಿಗಳು

ಹರ್ಯಾಣ: ಗಣಿ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದ ಡಿ ವೈ ಎಸ್ ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಹರ್ಯಾಣದ ಮೇವತ್ ನಲ್ಲಿ ನಡೆದಿದೆ.

ಪಚಗಾಂವ್ ನ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಡಿ ವೈ ಎಸ್ ಪಿ ಸುರೇಂದ್ರ ಕುಮಾರ್, ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕಲ್ಲು ತುಂಬಿದ್ದ ಟ್ರಕ್ ನಿಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ಟ್ರಕ್ ಚಾಲಕ ಹಾಗೂ ದುಷ್ಕರ್ಮಿಗಳು ಸುರೇಂದ್ರ ಕುಮಾರ್ ಅವರಿಗೆ ಡಿಕ್ಕಿ ಹೊಡೆಸಿದ್ದಾರೆ. ಕೆಳಗೆ ಬಿದ್ದ ಡಿ ವೈ ಎಸ್ ಪಿ ಮೇಲೆ ಟ್ರಕ್ ಹರಿಸಿದ್ದಾರೆ.

ಡಿ ವೈ ಎಸ್ ಪಿ ಸುರೇಂದ್ರ ಕುಮಾರ್ ಮೇಲೆಯೇ ದುಷ್ಕರ್ಮಿಗಳು ಟ್ರಕ್ ಹರಿಸಿದ್ದು, ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಐಜಿಪಿ ರವಿ ಕಿರಣ್ ಮಾಹಿತಿ ನೀಡಿದ್ದಾರೆ. ಸುರೇಂದ್ರ ಕುಮಾರ್ ಈ ವರ್ಷ ಸೇವೆಯಿಂದ ನಿವೃತ್ತಿಯಾಗುವವರಿದ್ದರು. ಆದರೆ ಅಕ್ರಮ ಗಣಿಗಾರಿಕೆ ಮಾಫಿಯಾ ಅಟ್ಟಹಾಸಕ್ಕೆ ಅವರು ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...