alex Certify ಹನುಮಾನ್ ಚಾಲೀಸಾ ಪಠಣದ ರಾಜಕೀಯಕ್ಕೆ ಭೂಗತ ಲೋಕದ ಸಂಪರ್ಕವಿದೆಯೇ ? ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನುಮಾನ್ ಚಾಲೀಸಾ ಪಠಣದ ರಾಜಕೀಯಕ್ಕೆ ಭೂಗತ ಲೋಕದ ಸಂಪರ್ಕವಿದೆಯೇ ? ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್ ಪ್ರಶ್ನೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಬಿಲ್ಡರ್ ಯೂಸುಫ್ ಲಕ್ಡಾವಾಲಾ ಅವರಿಂದ ಸ್ವತಂತ್ರ ಸಂಸದ ನವನೀತ್ ರಾಣಾ ಅವರು 80 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಲ್ಲಿನ ಆರ್ಥರ್ ರೋಡ್ ಜೈಲಿನಲ್ಲಿ ಲಕ್ಡಾವಾಲಾ ಸಾವನ್ನಪ್ಪಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, 1993ರ ಮುಂಬೈ ಸರಣಿ ಸ್ಫೋಟದಂತೆಯೇ ಹನುಮಾನ್ ಚಾಲೀಸಾ ಪಠಣದ ರಾಜಕೀಯ ಗದ್ದಲಕ್ಕೂ ಭೂಗತ ಲೋಕದ ಸಂಪರ್ಕವಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತೋಶ್ರಿ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಕರೆ ನೀಡಿದ್ದ ದಂಪತಿ ಶಾಸಕ ಪತಿ ರವಿ ರಾಣಾ, ಸಂಸದೆ ನವನೀತ್ ರಾಣಾ ಅವರನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

BIG NEWS: ಬೂಸ್ಟರ್ ಡೋಸ್ ಅಂತರ 6 ತಿಂಗಳಿಗೆ ಇಳಿಕೆ ಸಾಧ್ಯತೆ

ಇತ್ತೀಚೆಗೆ ಜೈಲಿನಲ್ಲಿ ನಿಧನರಾದ ಯೂಸುಫ್ ಲಕ್ಡಾವಾಲಾ ಅವರಿಂದ ನವನೀತ ರಾಣಾ 80 ಲಕ್ಷಗಳ ಸಾಲ ಪಡೆದರು. ಅದೇ ಲಕ್ಡಾವಾಲಾ ಅವರನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ed ಅವರು ಬಂಧಿಸಿದ್ದಾರೆ. ಇಡಿ ಈ ವಿಷಯವನ್ನು ತನಿಖೆ ಮಾಡಿದೆಯೇ. ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆ!” ಎಂದು ರಾವತ್ ಟ್ವೀಟ್ ಮಾಡಿ ಪ್ರಧಾನಿ ಕಚೇರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಗೆ ಟ್ಯಾಗ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...