alex Certify ಕೊರೊನಾ ಓಡಿಸಿ ಅಂದ್ರೆ ಐಎಎಸ್‌ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ: ಹೆಚ್​. ವಿಶ್ವನಾಥ್ ಗುಡುಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಓಡಿಸಿ ಅಂದ್ರೆ ಐಎಎಸ್‌ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ: ಹೆಚ್​. ವಿಶ್ವನಾಥ್ ಗುಡುಗು

ಮೈಸೂರಿನ ಸುತ್ತ ಮುತ್ತ ಕೇಳಿ ಬರ್ತಿರುವ ಭೂಹಗರಣದ ವಿಚಾರವಾಗಿ ಮಾತನಾಡಿದ ಎಂಎಲ್​ಸಿ ಹೆಚ್.​ ವಿಶ್ವನಾಥ್​ ರೋಹಿಣಿ ಸಿಂಧೂರಿಯನ್ನ ಆರು ತಿಂಗಳುಗಳ ಕಾಲ ವಿಶೇಷ ಅಧಿಕಾರಿಯಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.

ಚಾಮುಂಡಿ ಬೆಟ್ಟದ ಸುತ್ತ ಮುತ್ತಲಿನ ಜಾಗವನ್ನೂ ಒತ್ತುವರಿ ಮಾಡಲಾಗಿದೆ. ಮೈಸೂರು ಈಗ ರಿಯಲ್​ ಎಸ್ಟೇಟ್​ ಆಗಿ ಹೋಗಿದೆ. ಶಿಲ್ಪಾನಾಗ್​ ಈ ಹಗರಣದಲ್ಲಿ ಬಲಿಪಶು ಆಗಿದ್ದಾರೆ ಎಂದು ಗುಡುಗಿದ್ರು.

ಪ್ರಧಾನಿ ಮೋದಿ ಕೊರೊನಾ ಓಡಿಸಿ ಎಂದು ಕರೆ ನೀಡಿದ್ರೆ ಇವರೆಲ್ಲ ಐಎಎಸ್​ ಅಧಿಕಾರಿಗಳನ್ನ ಓಡಿಸುತ್ತಿದ್ದಾರೆ. ಶಿಲ್ಪಾನಾಗ್​ ಹೆಗಲ ಮೇಲೆ ಬಂದೂಕನ್ನಿಟ್ಟು ರೋಹಿಣಿ ಸಿಂಧೂರಿಯನ್ನ ಶೂಟ್​ ಮಾಡಿದ್ದಾರೆ. ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಸಾವಿರಾರು ಎಕರೆ ಜಾಗವನ್ನ ನುಂಗಿದ್ದಾರೆ. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್​ ಇಬ್ಬರೂ ಒಳ್ಳೆಯ ಅಧಿಕಾರಿಗಳು. ಆದರೆ ರಾಜಕಾರಣಿಗಳ ಸ್ವಾರ್ಥದಿಂದ ಈ ರೀತಿ ಆಗಿದೆ ಎಂದು ಹೇಳಿದ್ರು.

ಭೂ ಅಕ್ರಮದ ಬಗ್ಗೆ ತನಿಖೆ ಮಾಡಲು ಬಿಡಿ. ತಪ್ಪು ಮಾಡಿಲ್ಲ ಎಂದ ಮೇಲೆ ಹೆದರಿಕೆ ಏಕೆ..? ಸಾ.ರಾ. ಮಹೇಶ್​ರ ಪ್ರತಿಭಟನೆಯನ್ನ ನಾನು ಸ್ವಾಗತಿಸುತ್ತೇನೆ. ಆದರೆ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಕಲ್ಯಾಣ ಮಂಟಪದ ಬಗ್ಗೆ ಸೂಕ್ತ ದಾಖಲೆ ನೀಡಿ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...