alex Certify ಬಂದೂಕು ಕಸಿದುಕೊಂಡು ರೈಲ್ವೇ ಪೊಲೀಸ್ ಅಧಿಕಾರಿಯಾದ ಪತಿಗೆ ಗುಂಡಿಟ್ಟು ಹತ್ಯೆಗೈದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂದೂಕು ಕಸಿದುಕೊಂಡು ರೈಲ್ವೇ ಪೊಲೀಸ್ ಅಧಿಕಾರಿಯಾದ ಪತಿಗೆ ಗುಂಡಿಟ್ಟು ಹತ್ಯೆಗೈದ ಪತ್ನಿ

ಗುರುಗ್ರಾಮ: ಪತ್ನಿಯೊಬ್ಬರು ಕುಡಿದ ಮತ್ತಿನಲ್ಲಿದ್ದ ತನ್ನ ಪತಿ ಸರ್ಕಾರಿ ರೈಲ್ವೇ ಪೊಲೀಸ್‌ನ (ಜಿಆರ್‌ಪಿ) ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಘಟನೆ ನಡೆದಿದೆ.

ಮೃತರನ್ನು 49 ವರ್ಷದ ರಾಜ್‌ಬೀರ್ ಎಂದು ಗುರುತಿಸಲಾಗಿದೆ. ಅವರು ರೇವಾರಿ ರೈಲು ನಿಲ್ದಾಣದ ಜಿಆರ್‌ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಪತ್ನಿ ಆರತಿ ಮತ್ತು ಮಗ ಅನು ಅಲಿಯಾಸ್ ಯಶ್ ಅವರೊಂದಿಗೆ ಗುರುಗ್ರಾಮ್‌ದ ಶಿಕೋಪುರ್ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಮುಂಜಾನೆ 5 ಗಂಟೆ ಸುಮಾರಿಗೆ ರಾಜ್‌ಬೀರ್ ಮತ್ತು ಆರತಿ ನಡುವೆ ತೀವ್ರ ವಾಗ್ವಾದ ಘಟನೆ ನಡೆದಾಗ. ಕುಡಿದ ಅಮಲಿನಲ್ಲಿದ್ದ ಪತ್ನಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಎನ್ನಲಾಗಿದೆ. ಪತಿ ರಾಜ್ ಬೀರ್ ಕೂಡ ಆರತಿಯ ಮೇಲೆ ಗುಂಡು ಹಾರಿಸಿದ್ದರಿಂದ ಆಕೆ ಗಾಯಗೊಂಡಿದ್ದಾಳೆ.

ಆಯುಧವು ಹಾಸಿಗೆಯ ಮೇಲೆ ಬಿದ್ದಿತು. ಪತ್ನಿ ಅದನ್ನು ಕಸಿದುಕೊಂಡು ರಾಜ್ಬೀರ್ ಮೇಲೆ ಮೂರು ಗುಂಡು ಹಾರಿಸಿದ್ದಾರೆ. ಕೂಡಲೇ ಪುತ್ರ ಯಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ರಾಜ್ಬೀರ್ ಮೃತಪಟ್ಟಿದ್ದಾರೆ. ಆದರೆ, ಆರತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಿಳೆ ಮತ್ತು ಆಕೆಯ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅವರ ಮಗನ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಪರಾಧಕ್ಕೆ ಬಳಸಲಾದ ಆಯುಧವು ದೇಶ ನಿರ್ಮಿತ ಪಿಸ್ತೂಲ್ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ದೂರು ನೀಡಿರುವ ರಾಜ್ಬೀರ್ ಅವರ ಹಿರಿಯ ಸಹೋದರ ಸತ್ಬೀರ್ ಸಿಂಗ್, ಮೃತನ ಪತ್ನಿ ಮತ್ತು ಮಗನನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಈ ಕೊಲೆಯು ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.

ಸೆಕ್ಟರ್-10ಎ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...