alex Certify Shocking News​: ಅಡುಗೆ ಚೆನ್ನಾಗಿಲ್ಲ ಎಂದವನ ತಲೆಯನ್ನೇ ಒಡೆದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News​: ಅಡುಗೆ ಚೆನ್ನಾಗಿಲ್ಲ ಎಂದವನ ತಲೆಯನ್ನೇ ಒಡೆದ ಮಹಿಳೆ..!

ಗುಜರಾತ್​​ನ ರಾಜ್​ಕೋಟ್​​ನಲ್ಲಿ ವ್ಯಕ್ತಿಯೊಬ್ಬ ಸಾವು ಸಂಬಂಧ ಸ್ಥಳೀಯ ಪೊಲೀಸರು 40 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪತಿಯನ್ನು ಬಂಧಿಸಿದ್ದಾರೆ.

ಮೃತ ವ್ಯಕ್ತಿಯನ್ನು ಸಂತೋಷ್​ ಸೋಲಂಕಿ ಎಂದು ಗುರುತಿಸಲಾಗಿದೆ. ಇವರ ಮೃತದೇಹ ರಾಜಾಕೋಟ್​​ ಪ್ಯಾರಾ ಪಿಪಾರಿಯಾ ಬಳಿಯಲ್ಲಿ ಸೆಣಬಿನ ಚೀಲದಲ್ಲಿ ಮುಖ ಹಾಗೂ ತಲೆ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸರ ವಿಚಾರಣೆ ವೇಳೆ ಸ್ಥಳೀಯರು ಕೇಸರಿ ಬಣ್ಣದ ಬಟ್ಟೆ ತೊಟ್ಟ ವ್ಯಕ್ತಿಯು ಸೋಮವಾರ ಆ ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ರಕ್ತದ ಕಲೆಗಳನ್ನು ಪರಿಶೀಲಿಸಿದ್ದಾರೆ. ಹೆಚ್ಚಿನ ತನಿಖೆ ವೇಳೆ ಗೀತಾ ಜಾಧವ್​ ಹಾಗೂ ಆಕೆಯ ಪತಿ ಆಟೋ ರಿಕ್ಷಾ ಚಾಲಕ ವಸಂದ್ ಜಾಧವ್​ ಈ ಕೊಲೆಯ ಆರೋಪಿಗಳು ಎಂದು ತಿಳಿದುಬಂದಿದೆ.

ಈ ದಂಪತಿ ಕಳೆದೊಂದು ವಾರದಿಂದ ಇದೇ ಏರಿಯಾದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಸುಮಾರಿಗೆ ಗೀತಾ ತಂದೆ ಅರ್ಜುನ್​ ಹಾಗೂ ಸೋಲಂಕಿ ಜಮ್ನಾಗರ್​​ನಿಂದ ಈ ಗುಡಿಸಲಿಗೆ ಆಗಮಿಸಿದ್ದರು.

ಗೀತಾ ಎಲ್ಲರಿಗೂ ರಾತ್ರಿಯ ಊಟಕ್ಕೆ ವ್ಯವಸ್ಥೆ ಮಾಡಿದ್ದಳು. ಆದರೆ ಸಂತೋಷ್ ಸೋಲಂಕಿ​​ ಆಹಾರ ರುಚಿಯಾಗಿಲ್ಲ ಎಂದು ಕಂಪ್ಲೇಂಟ್​ ಮಾಡಿದ್ದಾನೆ. ಇದರಿಂದ ಗೀತಾ ಹಾಗೂ ಸಂತೋಷ್​ ನಡುವೆ ವಾದ ತಾರಕಕ್ಕೇರಿದೆ. ಇಷ್ಟಕ್ಕೆ ಕೋಪಗೊಂಡ ಗೀತಾ ಸಂತೋಷ್ ಸೋಲಂಕಿ​ ತಲೆಗೆ ದೊಡ್ಡ ಕಲ್ಲಿನಿಂದ ಜಜ್ಜಿದ್ದಾರೆ. ಸ್ಥಳದಲ್ಲಿಯೇ ಸಂತೋಷ್​ ಸಾವನ್ನಪ್ಪಿದ್ದಾನೆ. ಬಳಿಕ ದಂಪತಿ ಸಂತೋಷ್​ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿದ್ದಾರೆ. ಹಾಗೂ ಆಟೋ ರಿಕ್ಷಾದಲ್ಲಿ ಮೃತದೇಹವನ್ನು ಕೊಂಡೊಯ್ದು ಪಾರಾ ಪಿಪಾಲಿಯಾ ಗ್ರಾಮದಲ್ಲಿ ಬಿಸಾಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...