alex Certify ಬಾದಾಮಿ ಜನ ಗೋ ಬ್ಯಾಕ್ ಅಂದಿದ್ರೆ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು: ಕಾರಜೋಳ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾದಾಮಿ ಜನ ಗೋ ಬ್ಯಾಕ್ ಅಂದಿದ್ರೆ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು: ಕಾರಜೋಳ ಟಾಂಗ್

ಚಿತ್ರದುರ್ಗ: ಬಾದಾಮಿ ಕ್ಷೇತ್ರದ ಜನ ಗೋ ಬ್ಯಾಕ್ ಎಂದು ಹೇಳಿದ್ದರೆ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಕ್ಷೇತ್ರದಲ್ಲಿಯೇ ಸಿದ್ಧರಾಮಯ್ಯ ಹೀನಾಯವಾಗಿ ಸೋತಿದ್ದರು. ಅವರಿಗೆ ಮರುಜನ್ಮ ನೀಡಿದ್ದು ಬಾದಾಮಿ ಕ್ಷೇತ್ರದ ಜನ. ಅಂದು ಅವರಿಗೆ ಬಾದಾಮಿಯ ಜನ ನೀವು ಹೊರಗಿನವರು ಗೋ ಬ್ಯಾಕ್ ಎಂದು ಹೇಳಿ ಸೋಲಿಸಿದ್ದರೆ ಸಿದ್ದರಾಮಯ್ಯ ಮಾಜಿ ಸಿಎಂ ಎಂದು ಬೋರ್ಡು ಹಾಕಿಕೊಳ್ಳಬೇಕಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ.

ಏಪ್ರಿಲ್ 4ರಂದು ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಚಿತ್ರದುರ್ಗಕ್ಕೆ ಬಿಜೆಪಿಯವರು ವಿಜಯಪುರ ಜಿಲ್ಲೆಯಿಂದ ಗೋವಿಂದ ಕಾರಜೋಳ ಕಾರಜೋಳ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಅವರನ್ನು ಚುನಾವಣೆಯನ್ನು ಸೋಲಿಸಿ ಪುನಃ ಅವರ ಜಿಲ್ಲೆಗೆ ವಾಪಸ್ ಕಳುಹಿಸಿ. ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್ ಎಂದು ಚಿತ್ರದುರ್ಗ ಜನತೆ ಒಕ್ಕೊರಲಿನಿಂದ ಹೇಳಬೇಕು ಎಂದು ಕರೆ ನೀಡಿದ್ದರು.

ಇದಕ್ಕೆ ಕಾರಜೋಳ ತಿರುಗೇಟು ನೀಡಿ, ಬಾದಾಮಿ ಜನ ಗೋ ಬ್ಯಾಕ್ ಸಿದ್ದರಾಮಯ್ಯ ಅಂದಿದ್ದರೆ ಮಾಜಿ ಮುಖ್ಯಮಂತ್ರಿಯಾಗಿಯೇ ಇರಬೇಕಿತ್ತು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...