alex Certify BIG NEWS: ಅಲ್ಪಸಂಖ್ಯಾತ ಪರ ಎನ್ನುವ ಕಾಂಗ್ರೆಸ್​ ಈ ಕೆಲಸ ಮಾಡಿ ತೋರಿಸಲಿ; ಬಹಿರಂಗ ಸವಾಲೆಸೆದ ಸಚಿವ ಗೋವಿಂದ ಕಾರಜೋಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಲ್ಪಸಂಖ್ಯಾತ ಪರ ಎನ್ನುವ ಕಾಂಗ್ರೆಸ್​ ಈ ಕೆಲಸ ಮಾಡಿ ತೋರಿಸಲಿ; ಬಹಿರಂಗ ಸವಾಲೆಸೆದ ಸಚಿವ ಗೋವಿಂದ ಕಾರಜೋಳ

ರಾಜ್ಯದಲ್ಲಿ ಬೈ ಎಲೆಕ್ಷನ್​ ಭರಾಟೆ ಜೋರಾಗಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲೇ ನಿರತವಾಗಿವೆ. ಸಿಂದಗಿ ಉಪ ಚುನಾವಣಾ ಕಣದಲ್ಲಿ ಪಕ್ಷದ ಅಭ್ಯರ್ಥಿಯ ಪ್ರಚಾರ ಕಾರ್ಯ ಕೈಗೊಂಡ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್​ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈದರು.

ದೇಶದಲ್ಲಿ ಚುನಾವಣೆ ಬಂದಾಗ ಕಾಂಗ್ರೆಸ್​ ಗೆ ಅಲ್ಪಸಂಖ್ಯಾತರು ಹಾಗೂ ದಲಿತರ ಬಗ್ಗೆ ಕನಿಕರ ಹುಟ್ಟುತ್ತೆ. ನಿಜ ಹೇಳಬೇಕು ಅಂದರೆ ಈ ಎರಡೂ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್​. ಗುಲಾಂ ನಬಿ ಆಜಾದ್,​​ ಸಂಜಯ್​ ಗಾಂಧಿ ಕಾಲದಿಂದ ಕಾಂಗ್ರೆಸ್​ನಲ್ಲಿ ಇದ್ದಾರೆ. ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಮಾಡಿಲ್ಲ. ಅನೇಕ ವರ್ಷಗಳಿಂದ ಆಜಾದ್​ ಪಕ್ಷಕ್ಕಾಗಿ ದುಡಿದಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್​ ಮಾಡಿ ತೋರಿಸಲಿ ಎಂದು ಕಾರಜೋಳ ಬಹಿರಂಗ ಸವಾಲು ಎಸೆದಿದ್ದಾರೆ.

ಕಾಂಗ್ರೆಸ್ಸಿಗರ ಮೋಸದ ಆಟ ಇನ್ನು ನಡೆಯೋದಿಲ್ಲ. ಸಿಂದಗಿ ಹಾಗೂ ಹಾನಗಲ್​ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಸೋಲುವ ಭೀತಿಯಲ್ಲಿ ಕಾಂಗ್ರೆಸ್​ ಮುಖಂಡರು ಏನೆಲ್ಲ ಮಾತನಾಡುತ್ತಿದ್ದಾರೆ. ಬಿಜೆಪಿ 1 ಮತಕ್ಕೆ 2 ಸಾವಿರ ರೂಪಾಯಿ ನೀಡುತ್ತಿದೆ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಹಣ- ಹೆಂಡ ಹಂಚಿ ಅಧಿಕಾರ ಸಾಧಿಸಿದ್ದು ಕಾಂಗ್ರೆಸ್​. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್​ ನಾಮಾವಶೇಷವಾಗಿದೆ ಎಂದು ಗುಡುಗಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...