“ಮೋಟಾರು ವಾಹನಗಳನ್ನು ಒಳಗೊಂಡ ಭೀಕರ ಅಪಘಾತಗಳಲ್ಲಿ ಸಂತ್ರಸ್ತರ ಪ್ರಾಣ ರಕ್ಷಣೆ ಮಾಡಲು ತುರ್ತಾಗಿ ಧಾವಿಸಿ, ಗೋಲ್ಡನ್ ಅವರ್ ಒಳಗೆ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಜ್ಜನರಿಗೆ 5,000 ರೂ.ಗಳ ವರೆಗೂ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು” ಎಂದು ಸಚಿವಾಲಯ ಘೋಷಿಸಿದೆ.
ಇದರೊಂದಿಗೆ ವರ್ಷವೊಂದರಲ್ಲಿ ಈ ಪುರಸ್ಕಾರ ಪಡೆದವರ ಪೈಕಿ ಅತ್ಯುತ್ತಮರಲ್ಲಿ 10 ಮಂದಿಯನ್ನು ಆಯ್ಕೆ ಮಾಡಿ, ಒಂದು ಲಕ್ಷ ರೂ.ಗಳ ನಗದು ಬಹುಮಾನದವರೆಗೂ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ ಸೋಯಾ……?
ಇಂಥ ಸಜ್ಜನರಿಗೆ ಪಾವತಿ ಮಾಡಲೆಂದು ಆರಂಭಿಕ ಹಂತದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ ತಲಾ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಸಚಿವಾಲಯ ತಿಳಿಸಿದೆ.
ಮೋಟಾರು ವಾಹನ ತಿದ್ದುಪಡಿ ಕಾಯಿದೆ, 2019ರ ನಿಯಮ 134ಎ ಪ್ರಕಾರ, ಇಂಥ ಆಪದ್ಬಾಂಧವರನ್ನು ಪುರಸ್ಕರಿಸುವ ಸಂಬಂಧ ಸೆಪ್ಟೆಂಬರ್ 29, 2020ರಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿದೆ.
ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಎಸ್ಎಸ್ಪಿ, ಮುಖ್ಯ ವೈದ್ಯಾಧಿಕಾರಿ, ಆರ್ಟಿಓಗಳ ಸಮಿತಿಯೊಂದು ಮೇಲ್ಕಂಡ ರೀತಿಯ ಆದರ್ಶಮಯ ಪ್ರಕರಣಗಳನ್ನು ಗುರುತಿಸಿ, ಅಂಥ ವ್ಯಕ್ತಿಗಳ ಹೆಸರುಗಳನ್ನು ತಂತಮ್ಮ ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ಶಿಫಾರಸು ಮಾಡಲಿದ್ದಾರೆ.
ಇದೇ ರೀತಿ, ರಾಜ್ಯ ಮಟ್ಟದಲ್ಲಿ ಮೇಲ್ಕಂಡ ನಿಯಮವನ್ನು ಅನುಷ್ಠಾನಗೊಳಿಸುವುದನ್ನು ನೋಡಿಕೊಳ್ಳಲೆಂದು ಆಯಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿ (ಗೃಹ), ಆಯುಕ್ತರು (ಆರೋಗ್ಯ), ಎಡಿಜಿಪಿ (ರಸ್ತೆ ಸುರಕ್ಷತೆ & ಸಂಚಾರ) ಸದಸ್ಯರಾಗಿ ಸಾರಿಗೆ ಆಯುಕ್ತರು ಹಾಗೂ ಕಾರ್ಯದರ್ಶಿಗಳ ಸದಸ್ಯರು ತ್ರೈಮಾಸಿಕ ಸಭೆಗಳನ್ನು ಹಮ್ಮಿಕೊಳ್ಳಲಿದ್ದು, ರಾಷ್ಟ್ರ ಮಟ್ಟದಲ್ಲಿ ಸನ್ಮಾನಿಸಲು ಪ್ರತಿ ವರ್ಷ ತಲಾ ಮೂರು ಮಂದಿಯ ಹೆಸರುಗಳನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಯಕ್ಕೆ ಶಿಫಾರಸು ಮಾಡಲಿವೆ.
ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಗಂಡ ಹೊರ ಹೋದ ನಂತ್ರ ಮನೆಗೆ ನುಗ್ಗಿ ಮಹಿಳೆ, ಮಗು ಬರ್ಬರ ಹತ್ಯೆ
ಈ ಶಿಫಾರಸುಗಳನ್ನು ಪರಿಶೀಲಿಸಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಹೆಸರುಗಳನ್ನು ಹಾಗೂ ಪ್ರಕರಣಗಳನ್ನು ಅವಲೋಕಿಸಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ವೇಳೆ ದೆಹಲಿಯಲ್ಲಿ ಒಂದು ಲಕ್ಷ ರೂ.ಗಳ ಬಹುಮಾನದೊಂದಿಗೆ ಪ್ರಮಾಣ ಪತ್ರ ನೀಡಲು ಹೆಸರುಗಳನ್ನು ಸೂಚಿಸುತ್ತವೆ.