alex Certify ರಾಮ ಭಕ್ತರಿಗೆ ಗುಡ್​ನ್ಯೂಸ್​: ಮಾಸ್ಟರ್​ ಪ್ಲಾನ್​ 2031ಕ್ಕೆ ಸಿಎಂ ಯೋಗಿ ಅನುಮೋದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ ಭಕ್ತರಿಗೆ ಗುಡ್​ನ್ಯೂಸ್​: ಮಾಸ್ಟರ್​ ಪ್ಲಾನ್​ 2031ಕ್ಕೆ ಸಿಎಂ ಯೋಗಿ ಅನುಮೋದನೆ

ಲಖನೌ: ಮುಂದಿನ ದಶಕದಲ್ಲಿ ಅಯೋಧ್ಯೆಯ ದೇಗುಲ ಪಟ್ಟಣವನ್ನು ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲ್ಯಾನ್​ ಅನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮೋದಿಸಿದ್ದಾರೆ.

ಮಾಸ್ಟರ್ ಪ್ಲ್ಯಾನ್​ 133.67 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಸುಮಾರು 12 ಲಕ್ಷ ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಜನರಿಂದ ಬಂದ 1,084 ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ನಂತರ ವಸತಿ ಮತ್ತು ನಗರ ಯೋಜನಾ ಇಲಾಖೆಯು ಮಾಸ್ಟರ್ ಪ್ಲ್ಯಾನ್​ 2031 ಅನ್ನು ಮುಖ್ಯಮಂತ್ರಿಗಳು ಮಂಡಿಸಿದರು.

ವಸತಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ್ ಗೋಕರ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಅಯೋಧ್ಯೆ ಮಾಸ್ಟರ್ ಪ್ಲಾನ್‌ಗೆ ಶೀಘ್ರವಾಗಿ ಅನುಮೋದನೆ ನೀಡಲಾಗಿದೆ. ಫೈಜಾಬಾದ್/ಅಯೋಧ್ಯೆಯ ಅಭಿವೃದ್ಧಿಗೆ ಕೊನೆಯ ಮಾಸ್ಟರ್ ಪ್ಲ್ಯಾನ್​ ಅನ್ನು 1983 ರಲ್ಲಿ ಸಿದ್ಧಪಡಿಸಲಾಗಿತ್ತು. ಅದರ ಅವಧಿ 2001 ರಲ್ಲಿ ಕೊನೆಗೊಂಡಿತ್ತು. ಯೋಗಿ ಸರ್ಕಾರವು ಇತರ ನಗರಗಳಿಗಿಂತ ಮೊದಲು ಅಯೋಧ್ಯೆ 2031 ಮಾಸ್ಟರ್ ಪ್ಲ್ಯಾನ್​ ಅನ್ನು ಅನುಮೋದಿಸಿದೆ ಎಂದು ಹೇಳಿದರು.

ನಗರದಲ್ಲಿ ಸುಮಾರು 4,295 ಮನೆಗಳನ್ನು ಹೊಂದಿರುವ ಏಳು ಕೊಳೆಗೇರಿ ಬಡಾವಣೆಗಳನ್ನು ಪರಿವರ್ತಿಸಲು ಗಮನಹರಿಸುವ ಅಗತ್ಯವಿದೆ ಎಂದು ಮಾಸ್ಟರ್ ಪ್ಲ್ಯಾನ್​ ಸಿದ್ಧಪಡಿಸಿದ ತಜ್ಞರು ತಿಳಿಸಿದ್ದಾರೆ. 2031 ರ ವೇಳೆಗೆ ವಾರ್ಷಿಕವಾಗಿ ನಾಲ್ಕು ಕೋಟಿಗೂ ಹೆಚ್ಚು ಪ್ರವಾಸಿಗರು ನಗರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...