ಮಂಗಳೂರು : ಮಂಗಳೂರು-ಗೋವಾದ ಮಡಗಾಂವ್ ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಡಿಸೆಂಬರ್ 30 ರ ನಾಳೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ಎರಡು ಅಮೃತ ಭಾರತ್ ರೈಲುಗಳು ಮತ್ತು ಐದು ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಲಿದ್ದಾರೆ. ದೇಶದ ಇತರ ಐದು ಮಾರ್ಗಗಳಲ್ಲಿ ವಂದೇ ಭಾರತ್ ಸೇವೆಗಳೊಂದಿಗೆ ಈ ರೈಲಿನ ನಿಯಮಿತ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಹಸಿರು ನಿಶಾನೆ ತೋರಲಿದ್ದಾರೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಮಂಗಳೂರು ಸೆಂಟ್ರಲ್ನ ಪ್ಲಾಟ್ಫಾರ್ಮ್ ನಂ.1ರಿಂದ ಬೆಳಗ್ಗೆ 8.30ಕ್ಕೆ ರೈಲು ಹೊರಟಿತ್ತು. ಉಡುಪಿ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ನಿಂತು ಮಧ್ಯಾಹ್ನ 12.23ಕ್ಕೆ ಮಡಗಾಂವ್ ಜಂಕ್ಷನ್ ತಲುಪಿತು. ಇದಕ್ಕೆ ಪ್ರತಿಯಾಗಿ, ರೈಲು ಮಧ್ಯಾಹ್ನ 12.53 ಕ್ಕೆ ಮಡಗಾಂವ್ ಜಂಕ್ಷನ್ನಿಂದ ಹೊರಟಿತು. ಕಾರವಾರದಿಂದ ಹೊರಟು ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಿತು.