alex Certify ಸಾರ್ವಜನಿಕರಿಗೆ ಸುವರ್ಣಾವಕಾಶ : ‘ಆಹಾರ ಮೇಳ’ದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರಿಗೆ ಸುವರ್ಣಾವಕಾಶ : ‘ಆಹಾರ ಮೇಳ’ದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು ಅ. 16 ಮತ್ತು 17 ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಅ. 16 ರಿಂದ ಅ.24 ರವರೆಗೆ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ದಿ: 16/10/2023 ರಂದು ಬೆಳಗ್ಗೆ 10.00ಕ್ಕೆ ಒಂದು ನಿಮಿಷದಲ್ಲಿ ಹಣ್ಣು ತಿನ್ನುವ ಸ್ಪರ್ಧೆ (ಮಹಿಳಾ ಮತ್ತು ಪುರುಷ ಪೊಲೀಸ್ರಿಗೆ) ಹಾಗೂ ಮಧ್ಯಾಹ್ನ 11.00 ಕ್ಕೆ ಎರಡು ನಿಮಿಷದಲ್ಲಿ ಕೊಟ್ಟೆ ಕಡುಬು ಮತ್ತು ಸಾಂಬರ್ ತಿನ್ನುವ ಸ್ಪರ್ಧೆಯನ್ನು (ಸಾರ್ವಜನಿಕರಿಗೆ) ನಗರದ ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ನಲ್ಲಿ ಏರ್ಪಡಿಸಲಾಗಿದೆ.

ದಿ: 17/10/2023 ರಂದು ನಗರದ ಶ್ರೀ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಮ. 12.00ಕ್ಕೆ ಅಡುಗೆ ಮಾಡುವ – ಗೋದಿ ರವೆ, ಪೇಣಿ ರವೆ ಉಪಯೋಗಿಸಿ ಖಾದ್ಯ ತಯಾರಿಸುವ (ಅಪ್ಪ, ಮಗಳು) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿ: 16/10/2023ರಿಂದ ದಿ: 24/10/2023ರ ವರೆಗೆ ವಿನೋಬನಗರದ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 25 ಸ್ಟಾಲ್ಗಳಲ್ಲಿ ಸಾಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ.ಈ ಎಲ್ಲಾ ಸ್ಪರ್ಧೆ ಮತ್ತು ಆಹಾರ ಮೇಳಕ್ಕೆ ಭಾಗವಹಿಸಲು ಇಚ್ಛಿಸುವವರು ಕೃಷ್ಣಮೂರ್ತಿ- 9886033982 ಮತ್ತು ನವೀನ್- 9902525752 ಇವರುಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಆಹಾರ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...