alex Certify SHOCKING: ಹುಟ್ಟುಹಬ್ಬದ ದಿನ ಆಟವಾಡುವಾಗಲೇ ಕಾದಿತ್ತು ದುರ್ವಿದಿ, ಜೀವವನ್ನೇ ತೆಗೆದ ಜೋಕಾಲಿ ಸೀರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಹುಟ್ಟುಹಬ್ಬದ ದಿನ ಆಟವಾಡುವಾಗಲೇ ಕಾದಿತ್ತು ದುರ್ವಿದಿ, ಜೀವವನ್ನೇ ತೆಗೆದ ಜೋಕಾಲಿ ಸೀರೆ

ಮಂಗಳೂರು: ಉಯ್ಯಾಲೆ ಆಡುವಾಗ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯದ ಏನೇಕಲ್ ಬಳಿ ನಡೆದಿದೆ.

ಬಾಬು ಅಜಿಲ ಮತ್ತು ಸುಶೀಲಾ ದಂಪತಿಯ 10 ವರ್ಷದ ಪುತ್ರಿ ಶ್ರುತಿ ಮೃತಪಟ್ಟ ಬಾಲಕಿ. 5 ನೇ ತರಗತಿ ಓದುತ್ತಿದ್ದ ಶ್ರುತಿ ಶುಕ್ರವಾರ ಹುಟ್ಟುಹಬ್ಬದ ಕಾರಣ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದಳು. ಸಂಜೆ ಮನೆಯ ಹೊರಗೆ ಸೀರೆಯಿಂದ ಮರಕ್ಕೆ ಜೋಕಾಲಿ ಕಟ್ಟಿಕೊಂಡು ಉಯ್ಯಾಲೆ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದುಕೊಂಡಿದೆ. ಇದರಿಂದಾಗಿ ಬಾಲಕಿ ಒದ್ದಾಡಿದ್ದಾಳೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರಿಲ್ಲದ ಕಾರಣ ಸುಳ್ಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...