alex Certify ಶಿವಮೊಗ್ಗ: ಆರತಕ್ಷತೆಯಲ್ಲಿ ಆಹಾರ ಸೇವಿಸಿದ 30 ಮಂದಿ ಅಸ್ವಸ್ಥ, ಫುಡ್ ಪಾಯ್ಸನ್ ನಿಂದ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ: ಆರತಕ್ಷತೆಯಲ್ಲಿ ಆಹಾರ ಸೇವಿಸಿದ 30 ಮಂದಿ ಅಸ್ವಸ್ಥ, ಫುಡ್ ಪಾಯ್ಸನ್ ನಿಂದ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಶಿವಮೊಗ್ಗದ ಹರಮಘಟ್ಟ ಆಲದಹಳ್ಳಿ ಗ್ರಾಮದಲ್ಲಿ ಸುಮಾರು 60 ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ ಆಗಿದ್ದು, ಅಸ್ವಸ್ಥ 30 ಮಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಹರಮಘಟ್ಟ ಆಲದಹಳ್ಳಿಯಲ್ಲಿ ಮದುವೆ ರಿಸೆಪ್ಷನ್ ನಲ್ಲಿ ಊಟ ಮಾಡಿದ್ದ 60ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯ್ಸನ್ ಆಗಿದೆ. 30 ಕ್ಕೂ ಅಧಿಕ ಮಂದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲವರು ಹೊಳಲೂರು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕುಟುಂಬವೊಂದರ ಮದುವೆ ಆರತಕ್ಷತೆ ಸಮಾರಂಭದಲ್ಲಿ ಊರಿನ ಜನ ಊಟ ಮಾಡಿದ್ದಾರೆ. ಎಲ್ಲರಿಗೂ ಬಹುತೇಕ ವಾಂತಿಬೇಧಿ ಆಗಿದೆ. ಕೆಲವರಿಗೆ ತಲೆನೋವು, ಸುಸ್ತಾಗಿದ್ದು ಅಸ್ವಸ್ಥರು ಆಸ್ಪತ್ರೆಗೆ ಹೋಗಿ ತೋರಿಸಿದಾಗ ಫುಡ್ ಪಾಯ್ಸನ್ ಆಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...