alex Certify BREAKING NEWS: ವಿಷಾಹಾರ ಸೇವಿಸಿ ಮೂವರ ಸಾವು; ಒಂದೇ ಕುಟುಂಬದವರ ಜೀವ ತೆಗೆದ ಮುದ್ದೆ, ಸಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವಿಷಾಹಾರ ಸೇವಿಸಿ ಮೂವರ ಸಾವು; ಒಂದೇ ಕುಟುಂಬದವರ ಜೀವ ತೆಗೆದ ಮುದ್ದೆ, ಸಾರು

ಚಿತ್ರದುರ್ಗ: ಇಸಾಮುದ್ರ ಗ್ರಾಮದಲ್ಲಿ ವಿಷಾಹಾರ ಸೇವಿಸಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿದ್ದಾರೆ.

ತಿಪ್ಪನಾಯಕ(46), ಅವರ ಪತ್ನಿ ಸುಧಾಬಾಯಿ(43) ಮತ್ತು ವೃದ್ಧೆ ಗುಂಡಿಬಾಯಿ(75) ಮೃತಪಟ್ಟಿದ್ದಾರೆ. ವಿಷಾಹಾರ ಸೇವಿಸಿದ ರಾಹುಲ್(18) ಮತ್ತು ರಮ್ಯಾ(16) ಅಸ್ವಸ್ಥರಾಗಿದ್ದು, ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ರಾತ್ರಿ ಮುದ್ದೆ, ಸಾರು ಸೇವನೆ ಬಳಿಕ ಅಸ್ವಸ್ಥರಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಮೂವರು ಮೃತಪಟ್ಟಿದ್ದಾರೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...