alex Certify ಕೆಲಸ ಹೋದ್ರೂ ‘ಆರ್ಥಿಕ’ ಸಮಸ್ಯೆ ಕಾಡ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಹೋದ್ರೂ ‘ಆರ್ಥಿಕ’ ಸಮಸ್ಯೆ ಕಾಡ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ….!

ಯಾವುದೇ ಉದ್ಯೋಗ ಶಾಶ್ವತವಲ್ಲ. ಕೊರೊನಾ ನಂತ್ರ ವಿಶ್ವದ ಸ್ಥಿತಿ ಸಂಪೂರ್ಣ ಬದಲಾಗಿದೆ. ಅನೇಕ ಕಂಪನಿಗಳು ನಷ್ಟದಲ್ಲಿವೆ. ಮತ್ತೆ ಕೆಲ ಕಂಪನಿಗಳು ಬಾಗಿಲು ಮುಚ್ಚಿವೆ. ಈ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ, ಕಳೆದುಕೊಳ್ತಿದ್ದಾರೆ.

ಉದ್ಯೋಗವಿದ್ದಾಗ ಕೈನಲ್ಲಿ ಕಾಸು ಓಡಾಡುವ ಕಾರಣ ಸಮಸ್ಯೆ ಆಗೋದಿಲ್ಲ. ಅದೇ ಕೆಲಸ ಕಳೆದುಕೊಂಡಾಗ, ಉಳಿತಾಯ ಶೂನ್ಯವಿದ್ದಾಗ ಜೀವನ ನಡೆಸೋದು ಕಷ್ಟ. ಆ ಪರಿಸ್ಥಿತಿಯಲ್ಲಿ ಜನರು ಕಂಗಾಲಾಗ್ತಾರೆ. ಯಾವುದೇ ಸಮಯದಲ್ಲಿ ನಿಮ್ಮ ಉದ್ಯೊಗವೂ ಹೋಗ್ಬಹುದು. ಆ ಸಮಯದಲ್ಲಿ ನಿಮ್ಮ ಬಳಿ ಸಾಕಷ್ಟು ಹಣ ಇರಬೇಕೆಂದ್ರೆ ನೀವು ಕೆಲ ನಿಯಮ ಪಾಲನೆ ಮಾಡಿ.

  • ನಿಮ್ಮ ಆರು ತಿಂಗಳ ಸಂಬಳಕ್ಕೆ ಅನುಗುಣವಾಗಿ ತುರ್ತು ನಿಧಿಯನ್ನು ಸಿದ್ಧಪಡಿಸಿ. ಕೆಲಸ ಕಳೆದುಕೊಂಡ ಸಮಯದಲ್ಲಿ ನೀವು ಈ ಹಣವನ್ನು ಬಳಸಿಕೊಳ್ಳಬಹುದು. ತುರ್ತು ನಿಧಿ ಸಾಮಾನ್ಯ ಉಳಿತಾಯದ ಜೊತೆ ಇರಬೇಕು.
  • ಕೈನಲ್ಲಿ ಹಣವಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡಬಾರದು. ಅನಗತ್ಯ ವಿಷ್ಯಕ್ಕೆ ನೀವು ಹಣ ಖರ್ಚು ಮಾಡದೆ ಹೋದಲ್ಲಿ ನಿಮ್ಮ ಸೇವಿಂಗ್‌ ಹೆಚ್ಚಾಗುತ್ತದೆ.
  • ಮ್ಯೂಚುವಲ್ ಫಂಡ್‌ ಅಥವಾ ಷೇರು ಮಾರುಕಟ್ಟೆಯಂತಹ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಇದು ನಿಮಗೆ ತುರ್ತು ಸಮಯದಲ್ಲಿ ನೆರವಾಗುತ್ತದೆ.
  • ಆರೋಗ್ಯ ವಿಮೆ ಮಾಡಿಸಲು ಮರೆಯಬೇಡಿ. ನೀವು ಅಥವಾ ಕುಟುಂಬಸ್ಥರ ಚಿಕಿತ್ಸೆಗೆ ನಿಮ್ಮ ಉಳಿತಾಯದ ಹಣವೆಲ್ಲ ಖಾಲಿಯಾಗ್ಬಹುದು. ಅದೇ ನೀವು ಆರೋಗ್ಯ ವಿಮೆ ಮಾಡಿಸಿದ್ರೆ ನೆಮ್ಮದಿ.
  • ಸಾಲ ಮಾಡದಿರುವುದು ಒಳ್ಳೆಯದು. ಅನಿವಾರ್ಯ ಎಂದಾಗ ಒಂದು ಸಾಲ ಮುಗಿದ ಮೇಲೆ ಇನ್ನೊಂದು ತೆಗೆದುಕೊಳ್ಳಿ. ಒಂದೇ ಬಾರಿ ಎರಡು ಮೂರು ಕಡೆ ಸಾಲ ಮಾಡಿದ್ದರೆ ಇಎಂಐಗೆ ನಿಮ್ಮೆಲ್ಲ ಸಂಬಳ ಖರ್ಚಾಗುವ ಕಾರಣ ಉಳಿತಾಯ ಸಾಧ್ಯವಾಗೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...