alex Certify ರಾತ್ರಿ ಜನರ ಬೆದರಿಸಿ ಹಣ ದೋಚಿದ್ದವರ ಮೇಲೆ ಫೈರಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಜನರ ಬೆದರಿಸಿ ಹಣ ದೋಚಿದ್ದವರ ಮೇಲೆ ಫೈರಿಂಗ್

ಕಲಬುರ್ಗಿ ಹೊರವಲಯದ ಬಬಲಾದ್ ಕ್ರಾಸ್ ಬಳಿ ದರೋಡೆಕೋರರ ಮೇಲೆ ಅಶೋಕನಗರ ಠಾಣೆ ಪೋಲೀಸರು ಫೈರಿಂಗ್ ಮಾಡಿದ್ದು, ಕಳೆದ ರಾತ್ರಿ ಜನರನ್ನು ಬೆದರಿಸಿ ಸುಲಿಗೆ ಮಾಡಿದ ದರೋಡೆಕೋರರನ್ನು ಬಂಧಿಸಲಾಗಿದೆ.

ಕಳೆದ ರಾತ್ರಿ ಜನರನ್ನು ಬೆದರಿಸಿ ಹಣ ನಾಲ್ವರ ತಂಡ ಹಣ ದೋಚಿತ್ತು. ಬಂಧಿಸಲು ತೆರಳಿದ್ದ ವೇಳೆ ಘಟನೆ ನಡೆದಿದೆ. ಸ್ಥಳೀಯರು ಇಬ್ಬರು ದರೋಡೆಕೋರರನ್ನು ಹಿಡಿದಿದ್ದರು. ಪರಾರಿಯಾಗಿದ್ದ ಮತ್ತಿಬ್ಬರನ್ನು ಹಿಡಿಯಲು ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ದಾಳಿ ಮಾಡಿ ಪರಾರಿಯಾಗಲು ದರೋಡೆಕೋರರು ಯತ್ನಿಸಿದ್ದು, ಪ್ರಾಣರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...