alex Certify BIG NEWS: ಸೂಪರ್ ಸ್ಟಾರ್ ನಿರ್ದೇಶಕನ ವಿರುದ್ಧ ಎಫ್ ಐ ಆರ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೂಪರ್ ಸ್ಟಾರ್ ನಿರ್ದೇಶಕನ ವಿರುದ್ಧ ಎಫ್ ಐ ಆರ್ ದಾಖಲು

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಕ ಆರ್.ವೆಂಕಟೇಶ್ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.

ನಟ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಸಿನಿಮಾವನ್ನು ಆರ್.ವೆಂಕಟೇಶ್ ಬಾಬು ನಿರ್ದೇಶನ ಮಾಡುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ನಿರ್ದೇಶಕರು ಹಾಗೂ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಿನಿಮಾ ಸಧ್ಯಕ್ಕೆ ರಿಲೀಸ್ ಆಗುವ ಲಕ್ಷಣಗಳು ಕಾಣುತ್ತಿಲ್ಲ.

ಈ ನಡುವೆ ಸೂಪರ್ ಸ್ಟಾರ್ ಸಿನಿಮಾ ನಿರ್ಮಾಪಕರು ತಮಗೆ ನಿರ್ದೇಶಕರಿಂದ ವಂಚನೆಯಾಗಿದೆ. ನಿರ್ದೇಶಕ ವೆಂಕಟೇಶ್ ಬಾಬು 1 ಕೋಟಿ 10 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಹೆಣ್ಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ಬಂಡವಾಳ ಪಡೆದು ಕೋಟ್ಯಂತರ ರೂಪಾಯಿ ಹಣವನ್ನು ವಂಚಿಸಿದ್ದಾರೆ. ಕಲಾವಿದರಿಗೂ ಹಣ ಕೊಡದೇ ತಮ್ಮ ಸ್ವಂತಕ್ಕಾಗಿ ಹಣ ಉಪಯೋಗಿಸಿಕೊಂಡಿದ್ದಾರೆ. ಅಲ್ಲದೇ ಸಿನಿಮಾವನ್ನು ನಿರ್ಮಾಪಕರಿಗೆ ಮಾಹಿತಿ ನೀಡದೆಯೇ ಮಾರಾಟವನ್ನೂ ಮಾಡಿದ್ದಾರೆ ಎಂದು ನಿರ್ಮಾಪಕ ಮೈಲಾರಿ ಗಂಭೀರ ಆರೋಪ ಮಾಡಿದ್ದಾರೆ.

ಆರಂಭದಲ್ಲಿ ಸೂಪರ್ ಸ್ಟಾರ್ ಸಿನಿಮಾವನ್ನು ಮೈಲಾರಿ ನಿರ್ಮಾಪಕರಾಗಿದ್ದರು. ನಂತರದಲ್ಲಿ ಚಿತ್ರತಂಡದಲ್ಲಿ ಹಲವು ಬದಲಾವಣೆಗಳಾಗಿ ಸತ್ಯನಾರಾಯಣ ಹಾಗೂ ರಮಾದೇವಿ ಎಂಬುವವರು ನಿರ್ಮಾಪಕರಾಗಿದ್ದರು ಎನ್ನಲಾಗಿದೆ. ಈಗ ನಿರ್ದೇಶಕರು ಹಾಗೂ ಇಬ್ಬರು ಹೊಸ ನಿರ್ಮಾಪಕರ ವಿರುದ್ಧವೂ ನಿರ್ಮಾಪಕ ಮೈಲಾರಿವಂಚನೆ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...