alex Certify ರಾಜ್ಯದಲ್ಲೂ ದೆಹಲಿ ಮಾದರಿ ಬೆಚ್ಚಿ ಬೀಳಿಸುವ ಹತ್ಯೆ: ತಂದೆ ಹತ್ಯೆಗೈದು ಅಂಗಾಂಗಗಳನ್ನು ಬೋರ್ ವೆಲ್ ಗೆ ಹಾಕಿದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲೂ ದೆಹಲಿ ಮಾದರಿ ಬೆಚ್ಚಿ ಬೀಳಿಸುವ ಹತ್ಯೆ: ತಂದೆ ಹತ್ಯೆಗೈದು ಅಂಗಾಂಗಗಳನ್ನು ಬೋರ್ ವೆಲ್ ಗೆ ಹಾಕಿದ ಪುತ್ರ

ವಿಜಯಪುರ: ದೆಹಲಿಯಲ್ಲಿ ಪ್ರಿಯತಮೆಯನ್ನು ಹತ್ಯೆ ಮಾಡಿ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಘಟನೆ ಮಾಸುವ ಮೊದಲೇ ಅಂತಹುದೇ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆ ಮುಧೋಳ ತಾಲೂಕಿನಲ್ಲಿ ನಡೆದಿದೆ.

ತಂದೆಯನ್ನೇ ಹತ್ಯೆ ಮಾಡಿದ ಪುತ್ರ ಅಂಗಾಂಗಗಳನ್ನು ಜಂಜರಕೊಪ್ಪದ ಜಮೀನು ಒಂದರ ನಿರುಪಯುಕ್ತ ಬೋರ್ವೆಲ್ ನಲ್ಲಿ ಹಾಕಿದ್ದಾನೆ. 54 ವರ್ಷದ ಪರಶುರಾಮ ಕುಳಲಿ ಕೊಲೆಯಾದ ವ್ಯಕ್ತಿ. ಅವರ ಪುತ್ರ ವಿಠ್ಠಲ್(20) ಕೊಲೆ ಆರೋಪಿಯಾಗಿದ್ದಾನೆ.

ಮೃತರ ಪತ್ನಿ ಸರಸ್ವತಿ ದೂರು ನೀಡಿದ್ದಾರೆ. ಸಿಪಿಐ ಅಯ್ಯನಗೌಡ ಪಾಟೀಲ, ಎಸ್ಐ ಸಂಗಮೇಶ ಹೊಸಮನಿ, ಕ್ರೈಂ ಪಿಎಸ್ಐ ಕೆ.ಬಿ. ಮಾಂಗ ಅವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

ಪರಶುರಾಮ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ವಿಠ್ಠಲ್ ಕೊಲೆ ಮಾಡಿ ನಿರುಪಯುಕ್ತ ಬೋರ್ವೆಲ್ ನಲ್ಲಿ ಅಂಗಾಂಗಗಳನ್ನು ಹಾಕಿದ್ದಾನೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...