alex Certify ಪದೇ ಪದೇ ಸಾವಿಗೆ ನಲುಗಿದ ಫ್ಯಾಮಿಲಿ: 8 ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಸಾವಿಗೆ ನಲುಗಿದ ಫ್ಯಾಮಿಲಿ: 8 ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಕಳೆದ ಎಂಟು ತಿಂಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಮೇಗರವಳ್ಳಿಯ ಕೆಪಿ ರಸ್ತೆಯ ಸಂಜೀವ ಅವರ ಕುಟುಂಬದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ. ಸಂಜೀವ ಅವರ ಪುತ್ರಿ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅನಾರೋಗ್ಯದ ಕಾರಣ ಬುಧವಾರ ಮೃತಪಟ್ಟಿದ್ದರು. ಎರಡು ತಿಂಗಳ ಹಿಂದೆ ಅವರ ಮೊದಲ ಪುತ್ರಿ ಪೂರ್ಣಿಮಾ ಸಾವನ್ನಪ್ಪಿದ್ದರು. ಈ ಮೊದಲು ಸಂಜೀವ ಅವರ ತಾಯಿ ಮೃತಪಟ್ಟಿದ್ದರು. ಗುರುವಾರ ಬೆಳಗಿನ ಜಾವ ಸಂಜೀವ ಕೂಡ ಸಾವನ್ನಪ್ಪಿದ್ದಾರೆ.

ಎರಡನೇ ಪುತ್ರಿ ಪದ್ಮಾವತಿ ಅವರು ಮೃತಪಟ್ಟ 12 ಗಂಟೆ ಅವಧಿಯಲ್ಲೇ ಸಂಜೀವ ಅವರು ಕೂಡ ಮೃತಪಟ್ಟಿದ್ದಾರೆ. ಅವರು ಪತ್ನಿ,ಪುತ್ರ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...