alex Certify ಸಾವಿನ ಮನೆಯಲ್ಲಿ ಪವಾಡ: ಐವರ ಮೃತದೇಹಗಳ ನಡುವೆಯೇ 4 ದಿನ ಕಳೆದ ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನ ಮನೆಯಲ್ಲಿ ಪವಾಡ: ಐವರ ಮೃತದೇಹಗಳ ನಡುವೆಯೇ 4 ದಿನ ಕಳೆದ ಮಗು

ಬೆಂಗಳೂರು: ಪತ್ರಕರ್ತ ಹಲ್ಲೆಗೆರೆ ಶಂಕರ್ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ನಿವಾಸದಲ್ಲಿ  ಶಂಕರ್ ಪತ್ನಿ ಭಾರತಿ, ಅವರ ಪುತ್ರ ಮಧುಸಾಗರ್, ಪುತ್ರಿಯರಾದ ಸಿಂಚನಾ, ಸಿಂಧುರಾಣಿ ಅವರು 9 ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿನ ಮನೆಯಲ್ಲಿ ಪವಾಡ ಎನ್ನುವಂತೆ ಮೂರು ವರ್ಷದ ಮಗು ಅದೃಷ್ಟವಶಾತ್ ಪಾರಾಗಿದೆ. ನಾಲ್ಕೈದು ದಿನಗಳ ಕಾಲ ಹೆಣಗಳ ನಡುವೆಯೇ ಮಗು ದಿನ ಕಳೆದಿದೆ. ಅನ್ನ, ನೀರು ಇಲ್ಲದೆ ಸಾವಿನ ಮನೆಯಲ್ಲಿದ್ದ ಮಗುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮನೆಯಲ್ಲಿದ್ದ ಆರು ಜನರ ಪೈಕಿ ಒಂದು ಮಗು ಮಾತ್ರ ಬಚಾವಾಗಿದೆ. 9 ತಿಂಗಳ ಹಸುಗೂಸನ್ನು ಕೊಂದ ನಾಲ್ವರು ನೇಣಿಗೆ ಶರಣಾಗಿದ್ದಾರೆ.

ಮೃತ ಸಿಂಚನಾ ಪುತ್ರಿ ಮೂರು ವರ್ಷದ ಪ್ರೇಕ್ಷಾ ನಾಲ್ಕೈದು ದಿನಗಳಿಂದ ಮೃತದೇಹಗಳ ನಡುವೆ ಆಹಾರವಿಲ್ಲದೆ ನರಳಿದ್ದು ಆಕೆಯನ್ನು ರಕ್ಷಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...