alex Certify ಸಂಬಳ ಸಿಗದ್ದಕ್ಕೆ ಬೇಸತ್ತು ಅತಿಥಿ ಉಪನ್ಯಾಸಕ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಳ ಸಿಗದ್ದಕ್ಕೆ ಬೇಸತ್ತು ಅತಿಥಿ ಉಪನ್ಯಾಸಕ ಆತ್ಮಹತ್ಯೆ

ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸತ್ತ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಶರಣಾದ ಘಟನೆಯು ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ನಾಗರಕರ್ನೂಲ್​​ ಜಿಲ್ಲೆಯ ವೆಲ್ಡಾಂಡಾದ ಸರ್ಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದ 29 ವರ್ಷದ ವ್ಯಕ್ತಿಯು ಶನಿವಾರ ಸೂಸೈಡ್​ ಮಾಡಿಕೊಂಡಿದ್ದಾರೆ.

ಮೃತ ವ್ಯಕ್ತಿಯು ಸಂಬಳ ಸರಿಯಾದ ಸಮಯಕ್ಕೆ ಬಾರದ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.

ಮೃತ ಉಪನ್ಯಾಸಕನನ್ನು ಗಣೇಶ್​ ಎಂದು ಗುರುತಿಸಲಾಗಿದೆ. ಇವರು ವೆಲ್​ಡಾಂಡಾದ ಬೊಲ್ಲಂಪಲ್ಲೆ ನಿವಾಸಿಯಾಗಿದ್ದರು ಎನ್ನಲಾಗಿದೆ. ಕಳೆದ 18 ತಿಂಗಳಿನಿಂದ ಇವರಿಗೆ ಸಂಬಳ ಸಂದಾಯವಾಗಿರಲಿಲ್ಲ.

ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ ಕಾಲೇಜಿನಲ್ಲಿ ಅವರ ಹುದ್ದೆಯನ್ನು ಕೂಡ ನವೀಕರಣ ಮಾಡಿರಲಿಲ್ಲ ಎಂದು ವೆಲ್ದಂಡ ಠಾಣೆಯ ಇನ್​​ಸ್ಪೆಕ್ಟರ್​ ರಾಮಕೃಷ್ಣ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...