
ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯಡಿಯಲ್ಲಿ ಶಾಕಿಂಗ್ ವಿಚಾರವೊಂದು ಬಯಲಿಗೆ ಬಂದಿದೆ. ರಾಜ್ಯದಲ್ಲಿ ಬಹುತೇಕ ಎಂಎಲ್ಎ ಹಾಗೂ ಎಂಎಲ್ಸಿಗಳು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸೋದ್ರಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಆರ್ಟಿಐ ಅರ್ಜಿಯಡಿಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ. ಇದರ ಪ್ರಕಾರ ಒಟ್ಟು 224 ಶಾಸಕರಲ್ಲಿ 147 ಮಂದಿ ಹಾಗೂ 75 ಎಂಎಲ್ಸಿಗಳಲ್ಲಿ 60 ಮಂದಿ ಜೂನ್ 30ರ ಒಳಗಾಗಿ ಆಸ್ತಿ ವಿವರಣೆ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿಲ್ಲ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಈ ರೀತಿ ಸರಿಯಾದ ಸಮಯಕ್ಕೆ ಲೋಕಾಯುಕ್ತಕ್ಕೆ ಆಸ್ತಿ ವಿವರಣೆ ನೀಡದೇ ಇರುವವರಲ್ಲಿ ಬೊಮ್ಮಾಯಿ ಸಂಪುಟದ ಸಚಿವರೂ ಹಾಗೂ ಕೆಲ ಮಾಜಿ ಸಚಿವರು ಸಹ ಇದ್ದಾರೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿರುವ ಕೆಲ ಪ್ರಮುಖರ ಹೆಸರು ಇಲ್ಲಿದೆ ನೋಡಿ :
ಹಾಲಿ ಸಚಿವರು :
ಜೆಸಿ ಮಾಧುಸ್ವಾಮಿ, ಕಾನೂನು ಸಚಿವ
ಬಿ.ಸಿ ಪಾಟೀಲ್, ಕೃಷಿ ಸಚಿವ
ಶ್ರೀರಾಮುಲು, ಸಾರಿಗೆ ಸಚಿವ
ಸುನೀಲ್ ಕುಮಾರ್, ಇಂಧನ ಸಚಿವ
ಮುನಿರತ್ನ, ತೋಟಗಾರಿಕಾ ಸಚಿವ
ಅಂಗಾರ ಎಸ್, ಮೀನುಗಾರಿಕಾ ಸಚಿವ
ಮಾಜಿ ಸಚಿವರು:
ರಮೇಶ್ ಜಾರಕಿಹೊಳಿ(ಬಿಜೆಪಿ)
ಹೆಚ್. ನಾಗೇಶ್(ಬಿಜೆಪಿ)
ಕೃಷ್ಣಭೈರೇಗೌಡ (ಕಾಂಗ್ರೆಸ್)
ಕೆ.ಜೆ ಜಾರ್ಜ್( ಕಾಂಗ್ರೆಸ್)
ಹೆಚ್.ಡಿ ರೇವಣ್ಣ( ಜೆಡಿಎಸ್)
ಜೆಡಿಎಸ್ ನಾಯಕರು
ಹೆಚ್ಡಿ ಕುಮಾರಸ್ವಾಮಿ, ಮಾಜಿ ಸಿಎಂ
ಅನಿತಾ ಕುಮಾರಸ್ವಾಮಿ, ಶಾಸಕಿ
ಹೆಚ್,ಡಿ ರೇವಣ್ಣ
ಕಾಂಗ್ರೆಸ್ ನಾಯಕರು :
ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ದಿನೇಶ್ ಗುಂಡೂರಾವ್
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಇಂತಹ ಪರಿಸ್ಥಿತಿಯಲ್ಲಿ ಲೋಕಾಯುಕ್ತವು ಜನಪ್ರತಿನಿಧಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುತ್ತದೆ. ಅವರು ಚುನಾಯಿತ ಪ್ರತಿನಿಧಿಗಳಿಗೆ ಈ ಮಾಹಿತಿಯನ್ನು ಸಲ್ಲಿಸುತ್ತಾರೆ. ಇದಾದ ಬಳಿಕ ಪತ್ರಿಕೆಗಳಲ್ಲಿ ಅವರ ಹೆಸರನ್ನು ಪ್ರಕಟಿಸಲಾಗುತ್ತದೆ. ಈ ಮೂಲಕ ಅವರು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಬಹಿರಂಗ ಮಾಡಲಾಗುತ್ತದೆ.