alex Certify ಸಿಖ್ , ಹಿಂದೂ ಸೇರಿದಂತೆ 392 ಮಂದಿಯನ್ನು ಕಾಬೂಲ್​ನಿಂದ ಕರೆತಂದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಖ್ , ಹಿಂದೂ ಸೇರಿದಂತೆ 392 ಮಂದಿಯನ್ನು ಕಾಬೂಲ್​ನಿಂದ ಕರೆತಂದ ಭಾರತ

ಭಾರತ ಭಾನುವಾರ ಸುಮಾರು 392 ಮಂದಿಯನ್ನು ಕಾಬೂಲ್​​ನಿಂದ ವಿಮಾನದ ಮೂಲಕ ಕರೆತಂದಿದೆ.

ಭಾರತ ಹಾಗೂ ಅಫ್ಘನ್​ ನಾಗರಿಕ ಸಿಖ್​​ ಹಾಗೂ ಹಿಂದೂಗಳನ್ನು ಕರೆತರಲಾಗಿದೆ. ಏರ್​ ಇಂಡಿಯಾ ಹಾಗೂ ಇಂಡಿಗೋದ 2 ವಿಮಾನಗಳು ತಜಕಿಸ್ತಾನ ಹಾಗೂ ಕತಾರ್​ನಿಂದ ಹಾರಾಟ ನಡೆಸಿವೆ. ಮುಂದಿನ ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ಭಾರತಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಇಂಜಿನಿಯರ್​​ಗಳ ಜೊತೆಗೆ ಇಕ್ನೂರ್​ ಸಿಂಗ್​ ಎಂಬ ಪುಟ್ಟ ಮಗುವನ್ನು ಕರೆತರಲಾಗಿದೆ. ಅಂದಹಾಗೆ ಇದು ಕಾಬೂಲ್​​ನಿಂದ ವಿಮಾನದ ಮೂಲಕ ಕರೆತರಲಾದ ಅತ್ಯಂತ ಕಿರಿಯ ಪ್ರಜೆಯಾಗಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಡಾರ್ಜೆಲಿಂಗ್​ನ ಹಲವಾರು ಕಾರ್ಮಿಕರನ್ನೂ ಸ್ಥಳಾಂತರಿಸಲಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇವರನ್ನು ತಾಯ್ನಾಡಿಗೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಹೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...