alex Certify ಹಲ್ಕಟ್ಟೊ – ಹಲಾಲ್ ಕಟ್ಟೊ ನನಗೆ ಗೊತ್ತಿಲ್ಲ; ಆದರೆ ಹಲಾಲ್ ಮಾಡಿದ ಮಾಂಸವನ್ನು ನಾನೆಂದೂ ತಿಂದಿಲ್ಲ: ಈಶ್ವರಪ್ಪ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಕಟ್ಟೊ – ಹಲಾಲ್ ಕಟ್ಟೊ ನನಗೆ ಗೊತ್ತಿಲ್ಲ; ಆದರೆ ಹಲಾಲ್ ಮಾಡಿದ ಮಾಂಸವನ್ನು ನಾನೆಂದೂ ತಿಂದಿಲ್ಲ: ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಹಲ್ಕಟ್ಟೊ – ಹಲಾಲ್ ಕಟ್ಟೊ ನನಗೆ ಗೊತ್ತಿಲ್ಲ. ಆದರೆ ಹಲಾಲ್ ಮಾಡಿದ ಮಾಂಸವನ್ನು ನಾನೆಂದೂ ತಿಂದಿಲ್ಲ. ತಿನ್ನಲಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಇತ್ತೀಚೆಗೆ ಹಲಾಲ್ ಇರುವ ವಸ್ತುಗಳ ವಿರುದ್ಧ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮru ಹಲಾಲ್ ಮೂಲಕ ದೇವರಿಗೆ ನಾವು ನೈವೇದ್ಯ ಮಾಡಿದ ಹಾಗೆ ಅವರು ಎಡೆ ಇಡುತ್ತಾರಂತೆ. ಅವರ ದೇವರಿಗೆ ಎಡೆ ಇಟ್ಟ ಮಾಂಸವನ್ನು ತಿನ್ನಲು ಹಿಂದುಗಳಿಗೇನು ಗ್ರಹಚಾರ? ನಾನಂತೂ ಹಲಾಲ್ ಮಾಡಿದ ಮಾಂಸವನ್ನು ತಿಂದಿಲ್ಲ. ತಿನ್ನುವುದೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನೆಲಕಚ್ಚುವ ತನಕ ಬಿಜೆಪಿಯ ಬಗ್ಗೆ ಟೀಕೆಯನ್ನು ಮುಂದುವರಿಸುತ್ತಲೇ ಇರುತ್ತದೆ. ಅವರ ಟೀಕೆಗೆ ಯಾವ ಅರ್ಥವೂ ಇಲ್ಲ. ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆಂದೂ ಕಾಂಗ್ರೆಸ್ ಅಧಿಕಾರ ನಡೆಸುವುದಿಲ್ಲ. ಅವರಿಗೆ ಹೋರಾಟವೂ ಗೊತ್ತಿಲ್ಲ. ಕೆಲಸ ಮಾಡುವುದೂ ಗೊತ್ತಿಲ್ಲ. ಪಾದಯಾತ್ರೆಗೆ ರಾಹುಲ್ ಗಾಂಧಿ ಬರಬೇಕಾಯಿತು ಎಂದು ವ್ಯಂಗ್ಯವಾಡಿದರು.

ಪಿಎಫ್ಐನಂತಹ ಸಂಘಟನೆಗಳು ವೀರ ಸಾವರ್ಕರ್ ಬಗ್ಗೆ ವಿರುದ್ಧವಾಗಿ ಮಾತನಾಡುತ್ತಾರೆ. ಸಾವರ್ಕರ್ ಸ್ವಾತಂತ್ರ್ಯ ಪ್ರೇಮವನ್ನು ಅರ್ಥ ಮಾಡಿಕೊಂಡಿರುವವರು ಈ ರೀತಿ ಮಾತನಾಡುವುದಿಲ್ಲ. ಇಷ್ಟು ವರ್ಷಗಳ ತನಕ ಸಾವರ್ಕರ್ ಅವರನ್ನು ಕಡೆಗಣಿಸಲಾಗಿತ್ತು. ಇನ್ನುಮುಂದೆ ಹೀಗೆ ಆಗುವುದಿಲ್ಲ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ ವೀರ ಯೋಧ ಸಾವರ್ಕರ್ ಎಂದೇ ಉಲ್ಲೇಖವಿದೆ. ಆದರೆ ಈಗ ವೀರ ಎನ್ನುವುದನ್ನು ತೆಗೆದುಹಾಕಲಾಗಿದೆ. ನಾವು ಅದನ್ನು ಸರಿಪಡಿಸುತ್ತೇವೆ. ಅಲೆಕ್ಸಾಂಡರ್ನನನ್ನು ಹೊಗಳಿರುವ ನಮ್ಮ ಇತಿಹಾಸ ಸಾವರ್ಕರ್ ಅವರನ್ನು ಮರೆತಿರುವುದು ವಿಷಾದ. ಇನ್ನು ಮುಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಚಿರಾಯುಗೊಳಿಸುತ್ತೇವೆ ಎಂದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...