alex Certify ತಮಿಳುನಾಡು ದೇವಸ್ಥಾನದಲ್ಲಿ ಆನೆಗೆ ಚಾಟಿ ಏಟು; ವಿಡಿಯೋ ನೋಡಿ ಅಸ್ಸಾಂ ಜನತೆ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳುನಾಡು ದೇವಸ್ಥಾನದಲ್ಲಿ ಆನೆಗೆ ಚಾಟಿ ಏಟು; ವಿಡಿಯೋ ನೋಡಿ ಅಸ್ಸಾಂ ಜನತೆ ಆಕ್ರೋಶ

ತಮಿಳುನಾಡಿನ ದೇವಸ್ಥಾನದ ಆವರಣದಲ್ಲಿ ಜೋಯ್ಮಾಲಾ ಎಂಬ ಆನೆಗೆ ಅನೇಕ ಮಾವುತರು ನಿರಂತರವಾಗಿ ಚಾವಟಿಯಿಂದ ಹೊಡೆದ ನಂತರ ಕಿರುಚುವ ವಿಡಿಯೋ ವೈರಲ್​ ಆಗಿದ್ದು, ಆದರ ಆರ್ತನಾದ ದೂರದ ಅಸ್ಸಾಂನಲ್ಲಿರುವವರ ಹೃದಯ ತಟ್ಟಿದೆ.

ಆ ಹೆಣ್ಣು ಆನೆಯು ಅಸ್ಸಾಂನ ಟಿನ್ಸುಕಿಯಾದ ಗಿರಿನ್​ ಮೊರನ್​ ಎಂಬವರಿಗೆ ಸೇರಿದ್ದಾಗಿತ್ತು. 2011 ರಲ್ಲಿ ಅರಣ್ಯ ಇಲಾಖೆಯಿಂದ ಅಗತ್ಯ ಅನುಮೋದನೆಯ ನಂತರ ಮಧ್ಯವರ್ತಿ ಮೂಲಕ ತಮಿಳುನಾಡು ದೇವಸ್ಥಾನಕ್ಕೆ ಆನೆಯನ್ನು ಮಾರಾಟ ಮಾಡಿದರು. ಇದೀಗ ಆನೆ ತಮಿಳುನಾಡಿನ ವಿರುದುನಗರದ ದೇವಸ್ಥಾನವೊಂದರಲ್ಲಿದೆ.

ಪೀಪಲ್​ ಫಾರ್​ ಎಥಿಕಲ್​ ಟ್ರೀಟ್ಮೆಂಟ್​ ಆಫ್​ ಅನಿಮಲ್​ ಆನೆಯು ಮಾವುತನ ಕೈಯಲ್ಲಿ ಚಿತ್ರಹಿಂಸೆಯನ್ನು ಎದುರಿಸುತ್ತಿದೆ ಎಂದು ದನಿ ಎತ್ತಿದೆ. ಅಂತಹ ಇತ್ತೀಚಿನ ವೈರಲ್​ ವಿಡಿಯೊ ಅಸ್ಸಾಂನಲ್ಲಿ ಜನರಲ್ಲಿ ಪರಿಣಾಮಕಾರಿ ಭಾವನೆ ಹುಟ್ಟುಹಾಕಿದೆ. ಜೊತೆಗೆ ಆನೆ ಮರಳಿ ತರಬೇಕೆಂಬ ಕೂಗೆದ್ದಿದೆ.

ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮುಬಿನಾ ಅಖ್ತರ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಜೋಯ್ಮಾಲಾ ಮಾತ್ರವಲ್ಲ, ಕಳೆದ 25 ವರ್ಷಗಳಲ್ಲಿ, ತಮಿಳುನಾಡಿನ ವಿವಿಧ ದೇವಾಲಯಗಳಿಗೆ 1,100 ಆನೆಗಳನ್ನು ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.

1996 ರಲ್ಲಿ ಮರಗಳನ್ನು ಕಡಿಯುವುದನ್ನು ಸುಪ್ರೀಂ ಕೋರ್ಟ್​ ನಿಷೇಧಿಸಿದ ನಂತರ, ಮಾಲೀಕರು ತಮ್ಮ ಆನೆಗಳನ್ನು ಸಾಕಲು ಅಸಾಧ್ಯವಾಯಿತು. ಹಾಗೆಯೇ, ಆನೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಆನೆಗಳನ್ನು ಗುತ್ತಿಗೆಗೆ ತೆಗೆದುಕೊಂಡು ಅವುಗಳನ್ನು ತಮಿಳುನಾಡಿಗೆ ಸ್ಥಳಾಂತರಿಸಿದರು ಎಂದು ಹೇಳಲಾಗಿದೆ.

ಮತ್ತೊಬ್ಬ ಪ್ರಾಣಿ ಹಕ್ಕು ಕಾರ್ಯಕರ್ತ ದಿಲೀಪ್​ ನಾಥ್​ ಮಾತನಾಡಿ, ದಕ್ಷಿಣ ರಾಜ್ಯಕ್ಕೆ ಧಾರ್ಮಿಕ ಪ್ರವಾಸದ ನೆಪದಲ್ಲಿ ಆನೆಗಳನ್ನು 3 ರಿಂದ 6 ತಿಂಗಳ ಕಾಲ ಗುತ್ತಿಗೆಗೆ ನೀಡಲಾಯಿತು ಮತ್ತು ಅವುಗಳನ್ನು ಹಿಂತಿರುಗಿಸಲಾಗಿಲ್ಲ. ಗುತ್ತಿಗೆ ಒಪ್ಪಂದ ಮುಗಿದರೂ ಆನೆಗಳನ್ನು ವಾಪಸ್​ ಕರೆತರಲು ಅರಣ್ಯ ಇಲಾಖೆಯಾಗಲಿ, ಆನೆ ಮಾಲೀಕರಾಗಲಿ ಕಾಳಜಿ ತೋರಿಲ್ಲ ಎಂದಿದ್ದಾರೆ.

ಆನೆಗಳನ್ನು ದೇವಾಲಯಗಳಿಗೆ 40 ಮತ್ತು 50 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತದೆ. ದೇವಾಲಯದ ಅಧಿಕಾರಿಗಳು ಸಂದರ್ಶಕರಿಂದ ಹಣವನ್ನು ಸಂಗ್ರಹಿಸಲು ಆನೆಗಳನ್ನು ಬಳಸುತ್ತಾರೆ ಎಂದು ದೂರಿದ್ದಾರೆ.

ಮತ್ತೊಂದೆಡೆ, ತಮಿಳುನಾಡು ಸರ್ಕಾರವು ದೇವಾಲಯದ ಆನೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್​ ಹೈಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ 63 ಆನೆಗಳು ರಾಜ್ಯದಲ್ಲಿ ದೇವಾಲಯಗಳು ಮತ್ತು ಖಾಸಗಿ ವ್ಯಕ್ತಿಗಳ ವಶದಲ್ಲಿವೆ ಎಂದು ವರದಿ ಸಲ್ಲಿಸಿದೆ. ಈ ಮಧ್ಯೆ, ಅಸ್ಸಾಂ ಸರ್ಕಾರವು ಮರಿಗಾಂವ್​ ಪೊಲೀಸ್​ ಅಧೀಕ್ಷಕ ಅಪರ್ಣಾ ನಟರಾಜನ್​ಗೆ ತಮಿಳುನಾಡಿಗೆ ಪ್ರಯಾಣಿಸಲು ಮತ್ತು ಆ ಆನೆಯ ಇತ್ತೀಚಿನ ಸ್ಥಿತಿಯನ್ನು ಕಂಡುಕೊಳ್ಳಲು ಆದೇಶಿಸಿದೆ. ಶುಕ್ರವಾರ ಅವರು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...