alex Certify BREAKING NEWS: ಹಿರಿಯ ನಟ ದ್ವಾರಕೀಶ್ ಗೆ ಸಾಲದ ಹಣ ವಾಪಸ್ ನೀಡಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಹಿರಿಯ ನಟ ದ್ವಾರಕೀಶ್ ಗೆ ಸಾಲದ ಹಣ ವಾಪಸ್ ನೀಡಲು ಸೂಚನೆ

ಬೆಂಗಳೂರು: ಸಾಲದ ಹಣ ವಾಪಸ್ ನೀಡಲು ಹಿರಿಯ ನಟ ದ್ವಾರಕೀಶ್ ಅವರಿಗೆ ಕೋರ್ಟ್ ಸೂಚನೆ ನೀಡಿದೆ. 52 ಲಕ್ಷ ರೂಪಾಯಿ ಹಣವನ್ನು ಕೆಸಿಎನ್ ಚಂದ್ರಶೇಖರ್ ಅವರಿಗೆ ಒಂದು ತಿಂಗಳಲ್ಲಿ ವಾಪಸ್ ಕೊಡಬೇಕು ಎಂದು ಸೂಚಿಸಲಾಗಿದೆ.

ಒಂದು ತಿಂಗಳ ಒಳಗೆ ಸಾಲದ ಹಣ ವಾಪಸ್ ನೀಡಬೇಕು ಎಂದು ಕೆಳ ನ್ಯಾಯಾಲಯದ ಆದೇಶವನ್ನು ೆತ್ತಿ ಹಿಡಿದ ಸೆಷನ್ಸ್ ಕೋರ್ಟ್ ತಿಳಿಸಿದೆ. 2013 ರಲ್ಲಿ ಕೆಸಿಎನ್ ಚಂದ್ರಶೇಖರ್ ಅವರಿಂದ ಹಿರಿಯ ನಟ ದ್ವಾರಕೀಶ್ 50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದು, ಸಾಲ ಪಡೆಯುವಾಗ ಚೆಕ್ ನೀಡಿದ್ದರು. ಬಳಿಕ ಸಾಲದ ಹಣ ವಾಪಸ್ ನೀಡದೆ ಅವರು ಸತಾಯಿಸಿದ್ದರು ಎನ್ನಲಾಗಿದೆ.

ನಾನು ಚೆಕ್ ನೀಡಿಲ್ಲ, ಚೆಕ್ ಗೆ ಸಹಿ ಮಾಡಿಲ್ಲ ಎಂದು ಹೇಳಿದ್ದರು. ಹೀಗಾಗಿ ಕೆಸಿಎನ್ ಚಂದ್ರಶೇಖರ್ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ನಲ್ಲಿ ವಿಚಾರಣೆಯ ಬಳಿಕ ಹಣ ವಾಪಸ್ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...