alex Certify SHOCKING: ವಸತಿ ಶಾಲೆಯಲ್ಲಿ ದುರ್ಗಾ ಪೂಜೆಗೆ ಇಟ್ಟಿದ್ದ ಸೇಬು ತಿಂದ 6 ವರ್ಷದ ಬಾಲಕನ ಹೊಡೆದು ಕೊಂದ್ರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವಸತಿ ಶಾಲೆಯಲ್ಲಿ ದುರ್ಗಾ ಪೂಜೆಗೆ ಇಟ್ಟಿದ್ದ ಸೇಬು ತಿಂದ 6 ವರ್ಷದ ಬಾಲಕನ ಹೊಡೆದು ಕೊಂದ್ರು

ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಶಾಲೆಯಲ್ಲಿ ಪೂಜೆಯ ವೇಳೆ ದುರ್ಗಾ ದೇವಿಗೆ ಅರ್ಪಿಸಲು ಇಟ್ಟಿದ್ದ ಸೇಬನ್ನು ಎತ್ತಿಕೊಂಡು ತಿಂದಿದ್ದಕ್ಕಾಗಿ ಆರು ವರ್ಷದ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಈ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಗಯಾದ ವಜೀರ್‌ ಗಂಜ್ ಬ್ಲಾಕ್‌ ನ ಬಾಕಿ ಬಿಘಾ ಗ್ರಾಮದಲ್ಲಿ ವಸತಿ ಶಾಲೆ ನಡೆಸುತ್ತಿದ್ದ ದಂಪತಿಯನ್ನು ಗಯಾ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಮಗು ವಿವೇಕ್‌ ನ ಅಜ್ಜ ರಾಮ್ ಬಾಲಕ್ ಪ್ರಸಾದ್ ಪೊಲೀಸರಿಗೆ ಹೇಳಿಕೆ ನೀಡಿ, ಶಾಲೆ ಆವರಣದಲ್ಲಿ ದುರ್ಗಾಪೂಜೆಯನ್ನು ಆಯೋಜಿಸಿದ್ದು, ಮೇಜಿನ ಮೇಲೆ ಕೆಲವು ಹಣ್ಣುಗಳು(ಪ್ರಸಾದ) ಇಡಲಾಗಿತ್ತು. ವಿವೇಕ್ ಸೇಬನ್ನು ತೆಗೆದುಕೊಂಡು ಸೇವಿಸಿದ್ದ. ಘಟನೆಯ ನಂತರ ಶಾಲೆಯ ಮಾಲೀಕರು ವಿವೇಕ್ ನನ್ನು ಕೊಠಡಿಯೊಂದರಲ್ಲಿ ಇಟ್ಟುಕೊಂಡು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ದೈಹಿಕ ಹಲ್ಲೆ ನಡೆಸಿದ ಬಳಿಕ ಆವರಣದ ಹೊರಗೆ ಎಸೆದಿದ್ದಾರೆ.

ನನ್ನ ಮೊಮ್ಮಗ ಶಾಲೆಯ ಗೇಟ್ ಹೊರಗೆ ಪ್ರಜ್ಞಾಹೀನನಾಗಿ ಹೋಗಿದ್ದಾನೆ, ನನ್ನ ಗ್ರಾಮದ ಒಬ್ಬ ಆಟೋ ಚಾಲಕ, ಪ್ರಜ್ಞಾಹೀನ ಸ್ಥಿತಿಯಲ್ಲಿ ವಿವೇಕ್‌ ನನ್ನು ಗಮನಿಸಿ, ವಜೀರ್‌ ಗಂಜ್ ಬ್ಲಾಕ್‌ನ ಉಖ್ರಾ ಗ್ರಾಮದ ಮನೆಗೆ ಕರೆತಂದು ನಮಗೆ ಒಪ್ಪಿಸಿದ್ದಾನೆ. ಅವನ ಸ್ಥಿತಿ ಗಂಭೀರವಾಗಿದ್ದರಿಂದ, ನಾವು, ನಾವು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು, ಅವರ ಸ್ಥಿತಿಯನ್ನು ನೋಡಿ ಆಸ್ಪತ್ರೆಯ ವೈದ್ಯರು ಮಗಧ್ ವೈದ್ಯಕೀಯ ಕಾಲೇಜಿಗೆ ಅವರನ್ನು ಶಿಫಾರಸು ಮಾಡಿದರು, ವಿವೇಕ್ ವೈದ್ಯಕೀಯ ಕಾಲೇಜಿಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು ಎಂದು ಹೇಳಿದ್ದಾರೆ.

ವಿವೇಕ್ ತನಗೆ ಹೊಡೆದಿರುವುದನ್ನು ವಿವರಿಸಿ, ವಿಕಾಸ್ ಸಿಂಗ್ ಮತ್ತು ಅವನ ಹೆಂಡತಿ ತನ್ನ ಎದೆಯ ಮೇಲೆ ಹೊಡೆದಿದ್ದಾರೆ ಎಂದು ನಮಗೆ ಹೇಳಿದ್ದಾನೆ ಎಂದು ಪ್ರಸಾದ್ ಹೇಳಿದರು.

ವಜೀರ್‌ ಗಂಜ್‌ ನ ಎಸ್‌ಹೆಚ್‌ಒ ರಾಮ್ ಎಕ್ಬಾಲ್ ಯಾದವ್, ನಾವು ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ವಿದ್ಯಾರ್ಥಿ ವಿವೇಕ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಆರೋಪಿಗಳು ವಿಕಾಸ್ ಸಿಂಗ್ ಮತ್ತು ಅವರ ಪತ್ನಿ ಶಾಲೆಯ ಮಾಲೀಕರಾಗಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...