alex Certify ಚಾಲಕನಿಂದಲೇ ಘೋರ ಕೃತ್ಯ: ಅಮೆರಿಕದಿಂದ ಬಂದ ವೃದ್ಧ ದಂಪತಿ ಹತ್ಯೆಗೈದು ಅವರ ತೋಟದಲ್ಲೇ ಹೂತಿಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಂದಲೇ ಘೋರ ಕೃತ್ಯ: ಅಮೆರಿಕದಿಂದ ಬಂದ ವೃದ್ಧ ದಂಪತಿ ಹತ್ಯೆಗೈದು ಅವರ ತೋಟದಲ್ಲೇ ಹೂತಿಟ್ಟ

ಚೆನ್ನೈ: 10 ತಿಂಗಳ ನಂತರ ಅಮೆರಿಕದಿಂದ ವಾಪಸಾದ ವೃದ್ಧ ದಂಪತಿಯನ್ನು ಅವರ ಚಾಲಕನೇ ಕೊಲೆ ಮಾಡಿ ಅವರಿಗೆ ಸೇರಿದ ತೋಟದ ಮನೆಯಲ್ಲಿ ಹೂತು ಹಾಕಿದ್ದಾನೆ. ಚಾಲಕನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ.

ಮೈಲಾಪುರ ನಿವಾಸಿಗಳಾದ ಶ್ರೀಕಾಂತ್ (60) ಮತ್ತು ಅನುರಾಧ (55) ಮೃತಪಟ್ಟವರು. 10 ತಿಂಗಳ ಕಾಲ ಯುಎಸ್‌ಎಯಲ್ಲಿರುವ ತಮ್ಮ ಮಗಳನ್ನು ಭೇಟಿ ಮಾಡಿದ ನಂತರ ದಂಪತಿಗಳು ಶನಿವಾರ ಮುಂಜಾನೆ 3.30 ರ ಸುಮಾರಿಗೆ ಚೆನ್ನೈಗೆ ಬಂದಿಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ 12 ಗಂಟೆಗೆ, ಅವರ ಮಗಳು ಸುನಂದಾ ಅವರನ್ನು ಫೋನ್‌ ನಲ್ಲಿ ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಸ್ನೇಹಿತನನ್ನು ಅವರ ಮನೆಗೆ ಕಳುಹಿಸಿದರು. ಮನೆಗೆ ನುಗ್ಗಿದ ನಂತರ ಸ್ನೇಹಿತನಿಗೆ ಮನೆ ಖಾಲಿಯಾಗಿತ್ತು. ಅವರ ಫೋನ್‌ ಗಳು ಸಹ ಸ್ವಿಚ್ ಆಫ್ ಆಗಿದ್ದರಿಂದ, ಸುನಂದಾ ಮೈಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತನ್ನ ಸ್ನೇಹಿತನನ್ನು ಕೇಳಿಕೊಂಡಳು.

10 ವರ್ಷಗಳಿಂದ ಅವರ ಬಳಿ ಕೆಲಸ ಮಾಡುತ್ತಿದ್ದ ಅವರ ಚಾಲಕ ಕೃಷ್ಣ ಅವರು ದಂಪತಿಯನ್ನು ಬರುವಾಗ ಅಪಹರಿಸಿ ಅವರ ಮನೆಗೆ ಬದಲಾಗಿ ನೆಮಿಲಿಚೇರಿಯಲ್ಲಿರುವ ಅವರ ಫಾರ್ಮ್‌ ಹೌಸ್‌ಗೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯನ್ನು ಕೊಲೆ ಮಾಡಿ ತೋಟದಲ್ಲಿ ಹೂತು ಹಾಕಿದ್ದ ಕೃಷ್ಣನನ್ನು ಪೊಲೀಸರು ಆಂಧ್ರದಲ್ಲಿ ಬಂಧಿಸಿದ್ದಾರೆ. ದಂಪತಿಯಿಂದ 4 ಲಕ್ಷ ರೂ. ಹಾಗೂ 50 ಪವನ್ ಚಿನ್ನವನ್ನು ಕದ್ದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೃಷ್ಣನನ್ನು ವಿಚಾರಣೆ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...