alex Certify ಜೀವವನ್ನೇ ತೆಗೆದ ಎಣ್ಣೆ ಹೊಡೆಯುವ ಚಾಲೆಂಜ್: 30 ನಿಮಿಷದಲ್ಲಿ 10 ಪ್ಯಾಕೆಟ್ ಮದ್ಯ ಸೇವಿಸಿದ ವ್ಯಕ್ತಿ ರಕ್ತವಾಂತಿ ಮಾಡಿಕೊಂಡು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವವನ್ನೇ ತೆಗೆದ ಎಣ್ಣೆ ಹೊಡೆಯುವ ಚಾಲೆಂಜ್: 30 ನಿಮಿಷದಲ್ಲಿ 10 ಪ್ಯಾಕೆಟ್ ಮದ್ಯ ಸೇವಿಸಿದ ವ್ಯಕ್ತಿ ರಕ್ತವಾಂತಿ ಮಾಡಿಕೊಂಡು ಸಾವು

ಹಾಸನ: ಮದ್ಯ ಸೇವಿಸುವ ಚಾಲೆಂಜ್ ಕಟ್ಟಿದ ವ್ಯಕ್ತಿ ಒಬ್ಬ ವಿಪರೀತ ಮದ್ಯ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ.

ಹಾಸನ ಜಿಲ್ಲೆ ಒಳ ನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ಘಟನೆ ನಡೆದಿದೆ. 90 ಎಂಎಲ್ ನ 10 ಪೌಚ್ ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವನ್ನುಪ್ಪಿದ್ದಾರೆ.

ಅತಿ ಹೆಚ್ಚು ಮದ್ಯ ಸೇವಿಸುವ ಬಗ್ಗೆ ದೇವರಾಜ್, ತಿಮ್ಮೇಗೌಡ ಬಾಜಿ ಕಟ್ಟಿದ್ದಾರೆ. 30 ನಿಮಿಷದಲ್ಲಿ 90 ಎಂಎಲ್ ನ 10 ಪೌಚ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಮದ್ಯ ಸೇವನೆ ಬಳಿಕ ತಿಮ್ಮೇಗೌಡ ರಕ್ತ ವಾಂತಿ ಮಾಡಿಕೊಂಡು ಬಿದ್ದಿದ್ದಾರೆ.

ತಿಮ್ಮೇಗೌಡ ಅಸ್ವಸ್ಥರಾದ ಬಳಿಕ ದೇವರಾಜ್, ಕೃಷ್ಣೇಗೌಡ ಪರಾರಿಯಾಗಿದ್ದಾರೆ. ಬಳಿಕ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆ ತಂದು ಬಿಟ್ಟಿದ್ದರು. ತಿಮ್ಮೇಗೌಡನ ಕುಟುಂಬಸ್ಥರು ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ದೇವರಾಜ್, ಕೃಷ್ಣೇಗೌಡ ವಿರುದ್ಧ ಮೃತ ತಿಮ್ಮೇಗೌಡರ ಪುತ್ರಿ ದೂರು ನೀಡಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...