alex Certify BIG NEWS: ಕುಡುಕ ಮಗನ ಕಿರುಕುಳಕ್ಕೆ ಬೇಸತ್ತ ಅಪ್ಪ ; ಪುತ್ರನನ್ನೇ ಹೊಡೆದು ಕೊಂದು ಬೆಂಕಿ ಹಚ್ಚಿದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕುಡುಕ ಮಗನ ಕಿರುಕುಳಕ್ಕೆ ಬೇಸತ್ತ ಅಪ್ಪ ; ಪುತ್ರನನ್ನೇ ಹೊಡೆದು ಕೊಂದು ಬೆಂಕಿ ಹಚ್ಚಿದ ತಂದೆ

ದೊಡ್ಡಬಳ್ಳಾಪುರ: ಕುಡುಕ ಮಗನ ಕಿರುಕುಳ, ಹಿಂಸೆಯಿಂದ ಬೇಸತ್ತ ತಂದೆಯೊಬ್ಬ ಹೆತ್ತ ಮಗನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿ ನಡೆದಿದೆ.

28 ವರ್ಷದ ಆದರ್ಶ್ ತಂದೆಯಿಂದ ಕೊಲೆಯಾದ ಯುವಕ. 58 ವರ್ಷದ ಜಯರಾಮಯ್ಯ ಮಗನನ್ನೇ ಕೊಂದ ತಂದೆ.

ಮಗ ಆದರ್ಶ್ ಪ್ರತಿ ದಿನ ಕುಡಿದುಬಂದು ಕಿರುಕುಳ ನೀಡುತ್ತಿದ್ದ. ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಅಲ್ಲದೇ ಇತ್ತೀಚೆಗೆ ಕುಡಿಯಲು ಹಣ ಕೊಡಲಿಲ್ಲ ಎಂದು ತಾಯಿಯ ಮೇಲೆ ಹಲ್ಲೆ ಮಾಡಿದ್ದನಂತೆ. ಮಗನ ಕುಡಿತದ ಚಟಕ್ಕೆ ನೊಂದುಬೆಂದ ತಂದೆ ಜಯರಾಮಯ್ಯ, ಮಗನ ಕೈ-ಕಾಲು ಕಟ್ಟಿಹಾಕಿ ಹೊಡೆದು ಕೊಲೆಗೈದು, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...