alex Certify ಶನಿದೋಷ ನಿವಾರಣೆ ಜೊತೆಗೆ ಅದೃಷ್ಟಕ್ಕಾಗಿ ಶನಿವಾರ ಮಾಡಿ ಈ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿದೋಷ ನಿವಾರಣೆ ಜೊತೆಗೆ ಅದೃಷ್ಟಕ್ಕಾಗಿ ಶನಿವಾರ ಮಾಡಿ ಈ ಕೆಲಸ…!

ಸನಾತನ ಧರ್ಮದಲ್ಲಿ ವಾರದ ಎಲ್ಲಾ ಏಳೂ ದಿನಗಳು ದೇವತೆಗಳಿಗೆ ಮೀಸಲಾಗಿವೆ. ಶನಿವಾರ ಶನಿ ದೇವರಿಗೆ ಮೀಸಲು. ಈ ದಿನದಂದು ಶನಿ ದೇವರನ್ನು ಪೂಜಿಸುವುದು ಮತ್ತು ಜ್ಯೋತಿಷ್ಯ ಕ್ರಮಗಳನ್ನು ಮಾಡುವುದರಿಂದ ವ್ಯಕ್ತಿಯ ಅದೃಷ್ಟ ಬೆಳಗುತ್ತದೆ.

ಜಾತಕದಲ್ಲಿ ಶನಿ ದೋಷ ಇರುವವರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸತಿಯ ಪ್ರಭಾವದಲ್ಲಿರುವವರಿಗೆ ಕೂಡ ಸಮಸ್ಯೆಗಳಾಗುತ್ತವೆ. ಅಂಥವರು ಶನಿವಾರದಂದು ತಪ್ಪದೇ ಶನಿದೇವರನ್ನು ಪೂಜಿಸಬೇಕು.

ಶನಿವಾರ ಶನಿದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜಾತಕದಲ್ಲಿ ಇರುವ ಶನಿದೋಷದ ಪ್ರಭಾವ ಕಡಿಮೆಯಾಗುತ್ತದೆ. ಅಲ್ಲದೆ ಬಾಕಿಯಿರುವ ಕೆಲಸವು ಪೂರ್ಣಗೊಳ್ಳಲು ಪ್ರಾರಂಭಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇವುಗಳ ಪೈಕಿ ನಾಯಿಗೆ ರೊಟ್ಟಿ ತಿನ್ನಿಸುವುದು ಸರಳ ಪರಿಹಾರ. ಶನಿವಾರ ಸಾಸಿವೆ ಎಣ್ಣೆಯನ್ನು ರೊಟ್ಟಿಗೆ ಹಚ್ಚಿ ನಾಯಿಗೆ ತಿನ್ನಿಸಿದರೆ ಶನಿದೇವರ ಕೃಪೆಗೆ ಪಾತ್ರರಾಗುತ್ತೀರಿ. ಇದು ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ ಶನಿದೇವನ ವಾಹನ ನಾಯಿ. ಶನಿವಾರ ನಾಯಿಗೆ ರೊಟ್ಟಿ ತಿನ್ನಿಸಿದರೆ ಶನಿದೇವ ಸಂತುಷ್ಟನಾಗುತ್ತಾನೆ ಎಂದು ಹೇಳಲಾಗುತ್ತದೆ. ಇದು ವ್ಯಕ್ತಿಯ ಜೀವನದಲ್ಲಿರುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಸಾಡೇ ಸತಿ ಅಥವಾ ಶನಿದೋಷ ಇರುವವರು ಈ ಪರಿಹಾರವನ್ನು ಮಾಡಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ನಾಯಿಗೆ ಸಾಸಿವೆ ಎಣ್ಣೆಯ ಚಪಾತಿ ತಿನ್ನಿಸುವುದರಿಂದ ರಾಹು-ಕೇತುಗಳಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತದೆ. ಇದರೊಂದಿಗೆ ಕಾಲ ಸರ್ಪ ದೋಷಕ್ಕೂ ಇದು ಪರಿಹಾರ ನೀಡುತ್ತದೆ.

ಶನಿವಾರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ಇದು ತುಂಬಾ ಫಲಪ್ರದವೆಂದು ಪರಿಗಣಿಸಲಾಗಿದೆ. ನಿರ್ಗತಿಕರಿಗೆ ಚಪಾತಿ ಅಥವಾ ರೊಟ್ಟಿಯನ್ನು ಉಣಬಡಿಸಿ.

ಶನಿದೇವನ ಅನುಗ್ರಹವನ್ನು ಪಡೆಯಬೇಕಾದರೆ ಶನಿವಾರ ಶನಿದೇವನ ದೇವಸ್ಥಾನಕ್ಕೆ ಹೋಗಿ, ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ದೀಪವನ್ನು ಬೆಳಗಿಸುವಾಗ ಅದರಲ್ಲಿ ಕಪ್ಪು ಎಳ್ಳನ್ನು ದಾನ ಮಾಡಬೇಕು.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...