alex Certify ಇಂದು ಈ ವಸ್ತುಗಳನ್ನು ಖರೀದಿಸಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಈ ವಸ್ತುಗಳನ್ನು ಖರೀದಿಸಬೇಡಿ

ಶನಿವಾರ, ಶನಿದೇವರಿಗೆ ಮೀಸಲು. ಶನಿವಾರದಂದು ಶನಿಯ ಆಶೀರ್ವಾದ ಪಡೆಯಲು ಭಕ್ತರು ನಾನಾ ಕಸರತ್ತು ಮಾಡ್ತಾರೆ. ಶನಿವಾರದಂದು ಹನುಮಂತನ ಆರಾಧನೆ ನಡೆಯುತ್ತದೆ. ಶನಿವಾರ, ಶನಿದೇವನ ಪೂಜೆ ಮಾಡಿದಲ್ಲಿ ಇಷ್ಟಾರ್ಥ ಈಡೇರುತ್ತದೆ ಎಂದು ನಂಬಲಾಗಿದೆ. ವಾರದ 7 ದಿನಕ್ಕೆ ಅದರದೇ ಆದ ವಿಶೇಷವಿದೆ. ಎಲ್ಲ ವಾರಗಳಲ್ಲೂ ಎಲ್ಲ ವಸ್ತುಗಳನ್ನು ಖರೀದಿ ಮಾಡುವುದು ಶುಭವಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ಕೆಲ ವಸ್ತುಗಳ ಖರೀದಿ ಮಾಡಬಾರದು.

ಶನಿವಾರದಂದು ಸಾಸಿವೆ ಎಣ್ಣೆಯನ್ನು ಖರೀದಿಸಬಾರದು. ಶನಿದೇವರ ಕೋಪಕ್ಕೆ ಇದು ಕಾರಣವಾಗುತ್ತದೆ. ಜೀವನದಲ್ಲಿ ಸಮಸ್ಯೆಗಳು ಇದ್ರಿಂದ ಎದುರಾಗುತ್ತವೆ.

ಜ್ಯೋತಿಷಿಗಳ ಪ್ರಕಾರ, ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆ ಶುರುವಾಗುವ ಸಾಧ್ಯತೆಯಿದೆ. ಶನಿವಾರ ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಆದ್ರೆ ಶನಿವಾರದಂದು ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದು ಶುಭಕರ.

ಶನಿವಾರದಂದು ಉಪ್ಪು ಖರೀದಿಸಬಾರದು. ಇದ್ರಿಂದ ಕಷ್ಟಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ.

ಶನಿವಾರದಂದು ಕಪ್ಪು ಎಳ್ಳನ್ನು ಖರೀದಿಸುವುದು ಅಶುಭ ಎನ್ನಲಾಗುತ್ತದೆ. ಇದು ವ್ಯಕ್ತಿಯ ಸಂತೋಷವನ್ನು ಹಾಳು ಮಾಡುತ್ತದೆ. ಹಾಗಾಗಿ ಶನಿವಾರದಂದು ಶನಿದೇವರ ಆರಾಧನೆ ಮಾಡುವವರು ಈ ವಸ್ತುಗಳ ಖರೀದಿ ಮಾಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...