alex Certify ಯಡಿಯೂರಪ್ಪ ವಯಸ್ಸಿನ ಮುಂದೆ ನಾವೆಲ್ಲರೂ ಬಚ್ಚಾ ಅಲ್ಲವೇ? ರಾಹುಲ್ ಗಾಂಧಿ ಬಚ್ಚಾ ಎಂಬ BSY ಹೇಳಿಕೆಗೆ ಡಿಕೆಶಿ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಡಿಯೂರಪ್ಪ ವಯಸ್ಸಿನ ಮುಂದೆ ನಾವೆಲ್ಲರೂ ಬಚ್ಚಾ ಅಲ್ಲವೇ? ರಾಹುಲ್ ಗಾಂಧಿ ಬಚ್ಚಾ ಎಂಬ BSY ಹೇಳಿಕೆಗೆ ಡಿಕೆಶಿ ಗರಂ

ಬಳ್ಳಾರಿ: ರಾಹುಲ್ ಗಾಂಧಿ ಬಚ್ಚಾ ಎಂಬ ಯಡಿಯೂರಪ್ಪ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ. ಯಡಿಯೂರಪ್ಪ ವಯಸ್ಸಿನ ಮುಂದೆ ನಾವೆಲ್ಲರೂ ಬಚ್ಚಾ ಅಲ್ಲವೇ? ನಾನು ಕೂಡ ಯಡಿಯೂರಪ್ಪನವರಿಗೆ ಗೌರವ ಕೊಡುತ್ತೇನೆ ಎಂದು ಹೇಳಿದ್ದಾರೆ.

ಮೊಳಕಾಲ್ಮುರಿನಲ್ಲಿ ಯಡಿಯೂರಪ್ಪ ಪರವಾಗಿ ರಾಹುಲ್ ಗಾಂಧಿ ಮಾತನಾಡಿದ್ದರು. ಯಾಕೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ಎಂದು ಪ್ರಶ್ನಿಸಿದ್ದರು. ಆ ಗೌರವ ಯಡಿಯೂರಪ್ಪನವರಿಗೂ ಇರಬೇಕಿತ್ತು ಎಂದು ಡಿಕೆಶಿ ಹೇಳಿದ್ದಾರೆ.

ಬಳ್ಳಾರಿಯ ಗಡಿ ಗ್ರಾಮ ಮೋಕಾದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿಯವರಿಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರಲ್ಲ. ನಿತ್ಯವೂ ನಮ್ಮಿಬ್ಬರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಐಕ್ಯತಾ ಯಾತ್ರೆಗೆ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ ಎಂದರು.

ಬಿಜೆಪಿಯವರು ಈಗ ಜನಸ್ಪಂದನ ಯಾತ್ರೆ ಮಾಡುತ್ತಿದ್ದಾರೆ. ಅಂದರೆ ಬಿಜೆಪಿಗೆ ಇಷ್ಟು ದಿನ ಜನರ ಸ್ಪಂದನ ಇರಲಿಲ್ಲವೇ ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, ಜನರೇ ಈ ಸರ್ಕಾರವನ್ನು ಕಿತ್ತುಗೆಯುವ ಸಂಕಲ್ಪ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...