alex Certify ಊಟ ಬಡಿಸಲಿಲ್ಲ ಅಂತ ಹೆಂಡತಿಯನ್ನೇ ಕೊಂದ ಪಾಪಿ ಪತಿ; ಹೆಣದ ಜೊತೆ ರಾತ್ರಿ ಕಳೆದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ಬಡಿಸಲಿಲ್ಲ ಅಂತ ಹೆಂಡತಿಯನ್ನೇ ಕೊಂದ ಪಾಪಿ ಪತಿ; ಹೆಣದ ಜೊತೆ ರಾತ್ರಿ ಕಳೆದ ಭೂಪ

ಆದರ್ಶ ದಂಪತಿಗಳನ್ನ ನೋಡಿರ್ತಿರಾ..? ದೃಷ್ಟಿ ತಾಕುವ ಹಾಗಿರುತ್ತೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಸಮಸಮವಾಗಿ ಭಾಗಿಯಾಗಿರ್ತಾರೆ. ಇಲ್ಲಿ ಒಂದು ಜೋಡಿ ಇದೆ ನೋಡಿ……ಕ್ಷುಲ್ಲಕ  ಕಾರಣಕ್ಕೆ ಹೆಂಡತಿಯನ್ನೇ ಕೊಂದು ಬಿಟ್ಟಿದ್ದಾನೆ ಪಾಪಿ ಗಂಡ.

ದಕ್ಷಿಣ ದಿಲ್ಲಿಯ ಫತ್ಹೇಪುರ್​​ ಎಂಬಲ್ಲಿ ನಡೆದ ಘಟನೆ ಇದು. ಗಂಡ-ಹೆಂಡತಿ ಇಬ್ಬರೂ ಸೇರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಗಂಡನೂ ಕುಡಿದಿದ್ದಾನೆ, ಹೆಂಡತಿಯೂ ಕುಡಿದಿದ್ದಾಳೆ. ಕುಡಿದ ಮತ್ತಿನಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಗಂಡ ಊಟ ಬಡಿಸಲು ಹೇಳಿದ್ದಾನೆ. ಹೆಂಡತಿ ಬಡಿಸೊಲ್ಲ ಅಂತ ಹೇಳಿದ್ದಾಳೆ. ಅಷ್ಟೆ ಆಗಿದ್ದು, ಕುಡಿದ ಮತ್ತಿನಲ್ಲಿದ್ದ ಗಂಡ ಕೈಗೆ ಸಿಕ್ಕ ದಿಂಬಿನಿಂದ ಹೆಂಡತಿಯನ್ನ ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಕೊನೆಗೆ ಹೆಂಡತಿ ಸತ್ತು ಹೋಗಿದ್ದಾಳೆ ಅನ್ನೋ ಅರಿವೆಯೂ ಇಲ್ಲದೆ ಅದೇ ಶವದ ಪಕ್ಕ ಮಲಗಿದ್ದಾನೆ. ಬೆಳಿಗ್ಗೆ ಎದ್ದಾಗಲೇ ತಾನು ಎಂಥಹ ಕೃತ್ಯ ಮಾಡಿದ್ದು ಅನ್ನೋದು ಆತನಿಗೆ ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಾರ ಪತಿಯನ್ನ ಬಂಧಿಸಿದ್ದಾರೆ.

ಕೊಲೆಯಾದ ಮಹಿಳೆಯನ್ನ ಸೋನಾಲಿ (39) ಅಂತ ಗುರುತಿಸಲಾಗಿದೆ. ಇನ್ನು ಕೊಲೆ ಆರೋಪಿಯನ್ನ ವಿನೋದ್ ದುಬೆ (47) ಅಂತ ಹೇಳಲಾಗಿದೆ. ಇಬ್ಬರು 2008ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು.

ಮದುವೆಯಾಗಿ 14 ವರ್ಷಗಳಾಗಿದ್ದರೂ ಇವರಿಗೆ ಮಕ್ಕಳಿರಲಿಲ್ಲ. ಕೊರೊನಾ ಸಮಯದಲ್ಲಿ ವಿನೋದ್ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ. ಇವರ ಮಧ್ಯೆ ಆಗಾಗ ಕಿತ್ತಾಟಗಳು ನಡೀತಾನೇ ಇದ್ದವು. ಕೊನೆಗೆ ಅದು ಕೊಲೆಯಲ್ಲಿ ಅಂತ್ಯವಾಗಿದೆ ಅಂತ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.

ಗಂಡ-ಹೆಂಡತಿ ಇಬ್ಬರು ಕೂತು ಮದ್ಯಪಾನ ಮಾಡಿದ್ದಾರೆ. ಕೊನೆಗೆ ಗಂಡ ಹೊಟ್ಟೆ ಹಸಿವು ಬಡಿಸು ಅಂತ ಹೇಳಿದ್ದಾನೆ. ಊಟ ಬಡಿಸದ ಹೆಂಡತಿ ಜೊತೆ ಜಗಳ ಆಡಿದ ವಿನೋದ್ ದಿಂಬಿನಿಂದ ಕೊಲೆ ಮಾಡಿದ್ದಾನೆ. ಆದರೆ ಅದು ಆತನಿಗೆ ಗೊತ್ತೆ ಆಗಿರಲಿಲ್ಲ.

ನಿರ್ಜೀವವಾಗಿದ್ದ ಆ ದೇಹವನ್ನ ಎಷ್ಟು ಎಬ್ಬಿಸಲು ಪ್ರಯತ್ನಿಸಿದರೂ ಆಕೆ ಎದ್ದಿರಲಿಲ್ಲ. ಕೊನೆಗೆ ಆತನೂ ಅಲ್ಲೇ ಮಲಗಿ ಬಿಟ್ಟಿದ್ದಾನೆ. ಬೆಳಿಗ್ಗೆ ಎದ್ದು ನೋಡಿದಾಗ ಪತ್ನಿಯ ಮೃತ ದೇಹವನ್ನ ನೋಡಿ ಗೆಳೆಯನಿಗೆ ಕರೆ ಮಾಡಿ ಹೇಳಿದ್ದಾನೆ. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಶವವನ್ನ ಪೋಸ್ಟ್​​ಮಾರ್ಟ್​ಮ್​​ಗೆ ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...