alex Certify ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಡೆತ್ ನೋಟ್ ನಲ್ಲಿ ಅಕ್ರಮ ಸಂಬಂಧ ಸೇರಿ ಸ್ಪೋಟಕ ರಹಸ್ಯ ಬಯಲು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಡೆತ್ ನೋಟ್ ನಲ್ಲಿ ಅಕ್ರಮ ಸಂಬಂಧ ಸೇರಿ ಸ್ಪೋಟಕ ರಹಸ್ಯ ಬಯಲು…?

ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ಬೆಂಗಳೂರಿನಲ್ಲಿ ಪತ್ರಕರ್ತ ಹಲ್ಲೆಗೆರೆ ಶಂಕರ್ ಕುಟುಂಬದ ಐವರು ಸಾವು ಕಂಡ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಮತ್ತೊಂದಿಷ್ಟು ಮಾಹಿತಿ ಗೊತ್ತಾಗಿದೆ.

ಹಲ್ಲೆಗೆರೆ ಶಂಕರ್ ಮನೆಯಲ್ಲಿ 3 ಡೆತ್ ನೋಟ್ ಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಸಿಂಚನಾ, ಸಿಂಧೂರಾಣಿ, ಮಧುಸಗರ್ ಅವರು ಪ್ರತ್ಯೇಕ ಡೆತ್ನೋಟ್ ಬರೆದಿಟ್ಟಿದ್ದಾರೆ.

ಮಕ್ಕಳು ಮಹಿಳೆಯರಿಗೆ ಕಿರುಕುಳ ನೀಡುವುದು ಇದೇ ಕೊನೆ ಎಂದು ಒಂದೇ ಹೆಡ್ಡಿಂಗ್ ನಲ್ಲಿ ಮೂವರು ಮಕ್ಕಳು ಡೆತ್ನೋಟ್ ಬರೆದಿದ್ದು, ಅವರು ನೇಣು ಬಿಗಿದುಕೊಂಡ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಶಂಕರ್ ಪುತ್ರಿಯರಾದ ಸಿಂಧೂರಾಣಿ, ಸಿಂಚನಾ ಅವರು, ನಮಗೆ ತಂದೆಯ ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಗಂಡನ ಮನೆಯಲ್ಲೂ ನೆಮ್ಮದಿ ಇರಲಿಲ್ಲ ಎಂದು ಉಲ್ಲೇಖಿಸಿದ್ದು, ತಮ್ಮ ಪತಿಯರ ಬಗ್ಗೆಯೂ ಅವರು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.

ಸಾವಿಗೂ ಮೊದಲು ಪುತ್ರ ಮಧುಸಾಗರ್ ಡೆತ್ ನೋಟ್ ಬರೆದಿಟ್ಟಿದ್ದು, ತಂದೆ ಶಂಕರ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ತಂದೆ ಶಂಕರ್ ಅಕ್ರಮ ಸಂಬಂಧದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಡೆತ್ ನೋಟ್ ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...