alex Certify ಕಾಲು ಸಂಕ ದಾಟುವಾಗ ನೀರು ಪಾಲಾಗಿದ್ದ ಸನ್ನಿಧಿ ಮೃತದೇಹ ಪತ್ತೆ: ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಸಂಕ ದಾಟುವಾಗ ನೀರು ಪಾಲಾಗಿದ್ದ ಸನ್ನಿಧಿ ಮೃತದೇಹ ಪತ್ತೆ: ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ

ಉಡುಪಿ: ಶಾಲೆಯಿಂದ ಮನೆಗೆ ವಾಪಸ್ ತೆರಳುವಾಗ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ 48 ಗಂಟೆ ನಂತರ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯ ಕಾಲ್ತೋಡು ಸಮೀಪ ಬೀಜಮಕ್ಕಿ ಬಳಿ ಸೋಮವಾರ ಸಂಜೆ ಸನ್ನಿಧಿ ಆಯತಪ್ಪಿ ಹರಿಯುವ ನೀರಿಗೆ ಬಿದ್ದಿದ್ದಳು. ಆಕೆಗಾಗಿ ನಿರಂತರ ಹುಡುಕಾಟ ನಡೆಸಲಾಗಿತ್ತು. ಕಾಲುಸಂಕದಿಂದ ಸುಮಾರು 500 ಮೀಟರ್ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ಸ್ಥಳೀಯ ಈಜುಗಾರರು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಸನ್ನಿಧಿಗಾಗಿ ಹುಡುಕಾಟ ನಡೆಸಿದ್ದರು. ಮಕ್ಕಿ ಮನೆಯ ಪ್ರದೀಪ್ ಪೂಜಾರಿ ಮತ್ತು ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲ ಪುತ್ರಿಯಾದ ಸನ್ನಿಧಿ ಮೃತಪಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...