alex Certify ಸಾವಿನಲ್ಲಿ ಅಂತ್ಯ ಕಂಡ ವಿವಾಹಿತೆ, ಯುವಕನ ಸಂಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲಿ ಅಂತ್ಯ ಕಂಡ ವಿವಾಹಿತೆ, ಯುವಕನ ಸಂಬಂಧ

ಚಿಕ್ಕಮಗಳೂರು: ವಿವಾಹಿತೆ ಮತ್ತು ಯುವಕನ ಪ್ರೇಮ ಸಾವಿನಲ್ಲಿ ಅಂತ್ಯ ಕಂಡಿದೆ. ಬೆಂಗಳೂರಿನ 36 ವರ್ಷದ ಲತಾ ಮತ್ತು ಹೊಸದುರ್ಗ ತಾಲೂಕು ಬೆಲಗೂರಿನ ಲಕ್ಷ್ಮಿಕಾಂತ್(31) ಮೃತಪಟ್ಟವರು ಎಂದು ಹೇಳಲಾಗಿದೆ.

ಪ್ಲಂಬಿಂಗ್ ಗುತ್ತಿಗೆದಾರನ ಪತ್ನಿಯಾಗಿದ್ದ ಲತಾ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮಿಕಾಂತ್ ನಡುವೆ ಗೆಳೆತನ ಬೆಳೆದಿತ್ತು. 15 ದಿನಗಳ ಹಿಂದೆ ಲಕ್ಷ್ಮಿಕಾಂತ್ ಊರಿಗೆ ಬಂದಿದ್ದಾನೆ. ಗಂಡನೊಂದಿಗೆ ಜಗಳ ಮಾಡಿಕೊಂಡ ಲತಾ ತವರು ಮನೆಗೆ ಹೋಗಿದ್ದಾರೆ.

ಫೆಬ್ರವರಿ 7ರಂದು ಲಕ್ಷ್ಮಿಕಾಂತ್ ಮತ್ತು ಲತಾ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಬುಧವಾರ ಕಡೂರು ತಾಲೂಕಿನ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇಗುಲದ ಸಮೀಪದ ವೇದಾವತಿ ನದಿಯ ಚೆಕ್ ಡ್ಯಾಂ ಬಳಿ ಬ್ಯಾಗ್ ಗಳು ಕಂಡುಬಂದಿವೆ. ನೀರಿನಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಗಟಿ ಠಾಣೆ ಪೊಲೀಸರು ಮೃತದೇಹವನ್ನು ಹೊರಗೆ ತೆಗೆದು ದೂರವಾಣಿ ಸಂಖ್ಯೆ ಪರಿಶೀಲಿಸಿ ಪತಿಗೆ ಮಾಹಿತಿ ನೀಡಿದ್ದಾರೆ. ಮರುದಿನ ಮುಳುಗು ತಜ್ಞ ಮಲ್ಪೆಯ ಈಶ್ವರ್ ಕರ್ಕೆರಾ ಅವರನ್ನು ಕರೆಸಿ ಲಕ್ಷ್ಮಿಕಾಂತ್ ಮೃತದೇಹ ಹೊರ ತೆಗೆದಿದ್ದು, ಸಂಬಂಧಿಕರಿಗೆ ಇಬ್ಬರ ಮೃತದೇಹ ಹಸ್ತಾಂತರ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...