alex Certify BIG NEWS: ಹುಣಸೋಡು ಸ್ಪೋಟದಲ್ಲಿ ಮೃತಪಟ್ಟ 5 ಮಂದಿ ಗುರುತು ಪತ್ತೆ; ಎಸ್.ಪಿ. ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಣಸೋಡು ಸ್ಪೋಟದಲ್ಲಿ ಮೃತಪಟ್ಟ 5 ಮಂದಿ ಗುರುತು ಪತ್ತೆ; ಎಸ್.ಪಿ. ಮಾಹಿತಿ

ಶಿವಮೊಗ್ಗ: ಗುರುವಾರ ರಾತ್ರಿ ಹುಣಸೋಡಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಆರು ಮಂದಿ ಪೈಕಿ ಐದು ಮಂದಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೋಡಿನಲ್ಲಿ ನಡೆದ ಸ್ಪೋಟದಲ್ಲಿ ಈವರೆಗೆ 6  ಜನರು ಮೃತರಾಗಿರುವುದು ತಿಳಿದು ಬಂದಿದ್ದು, 5  ಜನರ ಮೃತ ದೇಹಗಳನ್ನು  ಅವರ ಸಂಬಂಧಿಕರು ಗುರುತಿಸಿದ್ದಾರೆ.

ಪವನ್ ಕುಮಾರ್ ಬಿನ್ ಲೇಟ್ ತಿಮ್ಮಪ್ಪ(29) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ.

ಜಾವೀದ್ ಬಿನ್ ಮಹಮದ್ ಇಕ್ಬಾಲ್(28) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ.

ಚೆಲಿಮಾನು ರಾಜು ಬಿನ್ ಲೇಟ್ ಶ್ರೀನಿವಾಸಲು(24) ರಾಯದುರ್ಗ, ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ.

ಪ್ರವೀಣ ಬಿನ್ ಸುರೇಶ(36 ) ಅಂತರಗಂಗೆ, ಭದ್ರಾವತಿ

ಮಂಜುನಾಥ ಬಿನ್ ಲೇಟ್ ಸಿ.ಎಂ. ಬೋರೇಗೌಡ(35) ಅಂತರಗಂಗೆ ಕ್ಯಾಂಪ್, ಭದ್ರಾವತಿ ಇವರ ಗುರುತು ಪತ್ತೆ ಹಚ್ಚಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಶವಪರೀಕ್ಷೆಯ ನಂತರ ಅವರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗುವುದು ಬಾಕಿ ಇದ್ದು ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...