alex Certify ಮೋದಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ

ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರವು ಆಡಳಿತದ ಪ್ರತಿಯೊಂದು ಅಂಶದಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದು ಸುಬ್ರಮಣಿಯನ್​ ಸ್ವಾಮಿ ಕುಟುಕಿದ್ದಾರೆ. ನಿನ್ನೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಬೆನ್ನಲ್ಲೇ ಇಂದು ಈ ಸುಬ್ರಮಣಿಯನ್​ ಸ್ವಾಮಿ ಈ ಹೇಳಿಕೆ ನೀಡ್ತಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

ಆರ್ಥಿಕತೆ ಹಾಗೂ ಗಡಿ ಭದ್ರತೆ ವಿಚಾರಗಳಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರದ ನಡೆಯನ್ನು ಅವರು ವೈಫಲ್ಯ ಎಂದು ಜರಿದಿದ್ದಾರೆ. ಅಲ್ಲದೇ ಪೆಗಾಸಿಸ್​ ಭದ್ರತಾ ಉಲ್ಲಂಘನೆ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ಆಂತರಿಕ ಭದ್ರತೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕಾಶ್ಮೀರವು ಅಂಧಕಾರದಲ್ಲಿದೆ ಎಂದು ಕಿಡಿಕಾರಿದ್ದಾರೆ.

ಬುಧವಾರವಷ್ಟೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಹಾಡಿ ಹೊಗಳಿದ್ದ ಸುಬ್ರಮಣಿಯನ್​ ಸ್ವಾಮಿ, ದೀದಿಯ ರಾಜಕೀಯ ನಡೆಗಳನ್ನು ಜಯಪ್ರಕಾಶ್​ ನಾರಾಯಣ್​, ಮೋರಾರ್ಜಿ ದೇಸಾಯಿ, ರಾಜೀವ್​ ಗಾಂಧಿ, ಚಂದ್ರಶೇಖರ್​ ಹಾಗೂ ವಿ.ನರಸಿಂಹ ರಾವ್​​ಗೆ ಹೋಲಿಕೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ನುಡಿದಂತೆ ನಡೆಯುತ್ತಾರೆ. ಭಾರತದಲ್ಲಿ ಇಂಥ ಗುಣದ ರಾಜಕಾರಣಿಗಳು ಸಿಗೋದು ತುಂಬಾ ಕಡಿಮೆ ಎಂದು ಟ್ವೀಟಾಯಿಸಿದ್ದರು.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...