alex Certify ಆಸ್ತಿ ವಿಚಾರವಾಗಿ ಆಸ್ಪತ್ರೆಯಲ್ಲೇ ಅಣ್ಣನ ಕೊಲೆಗೈದ ತಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ವಿಚಾರವಾಗಿ ಆಸ್ಪತ್ರೆಯಲ್ಲೇ ಅಣ್ಣನ ಕೊಲೆಗೈದ ತಮ್ಮ

ದಾವಣಗೆರೆ: ಆಸ್ತಿ ವಿಚಾರಕ್ಕೆ ಜಗಳವಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಹರಿಹರ ತಾಲೂಕು ಆಸ್ಪತ್ರೆಯಲ್ಲಿ ಚಾಕುವಿನಿಂದ ಇರಿದು 34 ವರ್ಷದ ಕುಮಾರ್ ನನ್ನು ಹತ್ಯೆ ಮಾಡಲಾಗಿದೆ. ಅಣ್ಣ ಕುಮಾರ್ ನನ್ನು ಕೊಲೆ ಮಾಡಿ ತಮ್ಮ ನಾಗರಾಜ್ ಪರಾರಿಯಾಗಿದ್ದಾನೆ.

ಮೊದಲು ಜಗಳೂರಿನಲ್ಲಿ ಬೈಕ್ ನಲ್ಲಿ ತೆರಳುವಾಗ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆಗೂ ತೆರಳಿ ಚಾಕುವಿನಿಂದ ಇರಿದುಕೊಂಡು ನಾಗರಾಜ ಪರಾರಿಯಾಗಿದ್ದಾನೆ. ತಂದೆ ನಿಧನದ ಬಳಿಕ ಹರಿಹರದಲ್ಲಿದ್ದ ಮನೆಯಲ್ಲಿ ಪಾಲು ಕೇಳಿದ್ದ. ಇದೇ ವಿಚಾರಕ್ಕೆ ಅಣ್ಣನನ್ನು ತಮ್ಮ ನಾಗರಾಜ ಕೊಲೆ ಮಾಡಿದ್ದಾನೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...