alex Certify ಪೊಲೀಸರಿಂದ ಇಂದು ದರ್ಶನ್ ಗ್ಯಾಂಗ್ ವಿಚಾರಣೆ, ಕೊಲೆ ನಡೆದ, ಶವ ಎಸೆದ ಸ್ಥಳ ಮಹಜರು ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರಿಂದ ಇಂದು ದರ್ಶನ್ ಗ್ಯಾಂಗ್ ವಿಚಾರಣೆ, ಕೊಲೆ ನಡೆದ, ಶವ ಎಸೆದ ಸ್ಥಳ ಮಹಜರು ಸಾಧ್ಯತೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಮತ್ತು 12 ಮಂದಿಯನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪವಿತ್ರ ಗೌಡ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಇಂದು ದರ್ಶನ್ ಮತತ್ಉ ಸಹಚರರ ವಿಚಾರಣೆ ನಡೆಸಲಿದ್ದು, ಕೃತ್ಯ ನಡೆದ ಸ್ಥಳಗಳಲ್ಲಿ ಮಹಜರು ನಡೆಸುವ ಸಾಧ್ಯತೆ ಇದೆ. ಕೊಲೆಯಾದ ಸ್ಥಳ, ಮೃತದೇಹ ಎಸೆದ ಸ್ಥಳಗಳಲ್ಲಿ ಪೊಲೀಸರು ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಲಿದ್ದಾರೆ.

ಅಲ್ಲದೆ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ಕೃತ್ಯಕ್ಕೆ ಬಳಸಿದ ವೆಪನ್ ಗಳನ್ನು ವಶಕ್ಕೆ ಪಡೆಯಲಿದ್ದು, ಮೊಬೈಲ್ ಡೇಟಾ ಸಂಗ್ರಹಿಸಲಾಗುವುದು. ಆರು ದಿನಗಳಲ್ಲಿ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಪೊಲೀಸರು ಮುಂದಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...