alex Certify ದರ್ಶನ್ ಬಗ್ಗೆ ಮಾತಾಡುವ ಯೋಗ್ಯತೆ ನನಗಿಲ್ಲ: ಅರುಣಾಕುಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್ ಬಗ್ಗೆ ಮಾತಾಡುವ ಯೋಗ್ಯತೆ ನನಗಿಲ್ಲ: ಅರುಣಾಕುಮಾರಿ

ಬೆಂಗಳೂರು: ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಅರುಣಾ ಕುಮಾರಿ ಹೇಳಿಕೆ ನೀಡಿದ್ದಾರೆ.

ನಾನು ತಪ್ಪು ಮಾಡಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ದೊಡ್ಡ ವ್ಯಕ್ತಿಗಳ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಟ ದರ್ಶನ್ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನನಗಿಲ್ಲ. ನಾನು ಯಾರಿಂದಲೂ ಹಣ ಪಡೆದುಕೊಂಡಿಲ್ಲ. ನನ್ನ ಬಳಿ ಸಾಕ್ಷ್ಯಾಧಾರವಿದೆ ಎಂದು ನಾನು ಹೇಳಿಲ್ಲ. ನಾನು ಯಾವುದೇ ನಕಲಿ ಐಡಿ ಕಾರ್ಡ್ ಪಡೆದುಕೊಂಡಿಲ್ಲ. ನಾನು ಎಲ್ಲವನ್ನು ಪೊಲೀಸರ ಬಳಿ ತಿಳಿಸಿದ್ದೇನೆ. ನಾನು ಅಪರಾಧ ಮಾಡಿದ್ದರೆ ಸಾಬೀತುಪಡಿಸಿ ಎಂದು ಹೇಳಿದ್ದಾರೆ.

ನಾನು ವಂಚಿಸಿದ್ದಕ್ಕೆ ಸಾಕ್ಷಿ ಏನಿದೆ ಎಂದು ಅರುಣಾಕುಮಾರಿ ಪ್ರಶ್ನಿಸಿದ್ದು, ನನ್ನ ವಿರುದ್ಧ ವಂಚನೆ ಆರೋಪ ಸುಳ್ಳು. ನಾನು ಸುಳ್ಳು ಹೇಳಿದ್ದರೆ ಕಾನೂನು ನೋಡಿಕೊಳ್ಳುತ್ತದೆ. ಕಾನೂನಿನಡಿ ಉಮಾಪತಿಯವರ ವಿರುದ್ಧ ಹೋರಾಟ ನಡೆಸುತ್ತೇನೆ. ನನಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...